Bengaluru

ರಾಜಕೀಯಕ್ಕೆ ಬರುತ್ತಾರಾ ಡಾಲಿ ಧನಂಜಯ್‌..?; ನಟನ ಪ್ರತಿಕ್ರಿಯೆ ಏನು..?

ಬೆಂಗಳೂರು: ಸಿನಿಮಾ ಮಂದಿ ಅಂದ್ರೆ ಏನೋ ಒಂದು ಗಾಸಿಪ್‌ ಇದ್ದೇ ಇರುತ್ತೆ. ಕೆಲವೊಂದು ನಿಜವಾದರೂ, ಬಹುತೇಕವು ಅಂತೆಕಂತೆಗಳೇ ಆಗಿರುತ್ತವೆ.. ಡಾಲಿ ಧನಂಜಯ್‌ ಬಗ್ಗೆಯೂ ಒಂದು ಅಂತೆಕಂತೆ ಸುದ್ದಿ ಹರಿದಾಡಿತ್ತು. ಧನಂಜಯ್‌ ರಾಜಕೀಯಕ್ಕೆ ಬರುತ್ತಾರೆ. ಅರಸೀಕರೆ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ, ಧನಂಜಯ್‌ ಇದಕ್ಕೆ ಸ್ಪಷ್ಟ ಕೊಟ್ಟಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಮಾಹಿತಿ ಇಲ್ಲಿದೆ. 

ʻನಾನು shooting ಅಲ್ಲಿ ಎಷ್ಟು ಮುಳುಗಿ ಹೋಗಿದೀನಿ ಅಂದ್ರೆ ನನಗೆ ಈ ತರ ಒಂದು news ಆಗಿದೆ ಅನ್ನೋದೇ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ , ರಾಜಕೀಯಕ್ಕು ನನಗೂ ಯಾವುದೆ ಸಂಬಂಧ ಇಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು. ಸುಮ್ನೆ ಏನೇನೊ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು, ಎಲ್ಲ ಬಿಟ್ಟು, ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡನʼ ಹೀಗಂತ ಧನಂಜಯ್‌ ಬರೆದುಕೊಂಡಿದ್ದಾರೆ.

ಕೆಲವೊಬ್ಬರು ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿರುತ್ತಾರೆ. ಅದೇ ರೀತಿ ಧನಂಜಯ್‌ ಬಗ್ಗೆಯೂ ಸುದ್ದಿ ಹಬ್ಬಸಲಾಗಿತ್ತು. ಅದಕ್ಕೀಗ ಧನಂಜಯ್‌ ಅವರೇ ಸಮಜಾಯಿಷಿ ಕೊಟ್ಟಿದ್ದಾರೆ.

Share Post