CinemaCrime

ಪಂಚಾಮೃತದಲ್ಲಿ ಮಾತ್ರೆ ಬಳಕೆ ಆರೋಪ; ಸಿನಿಮಾ ನಿರ್ದೇಶಕ ಅರೆಸ್ಟ್‌!

ಚೆನ್ನೈ; ತಿರುಪತಿ ಲಡ್ಡುನಲ್ಲಿ ಪ್ರಾಣಿಗಳ ಕೊಬ್ಬ ಬಳಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದೆ.. ಹೀಗಿರುವಾಗಲೇ ತಮಿಳಿನ ಚಿತ್ರ ನಿರ್ದೇಶಕರೊಬ್ಬರು ವಿವಾದಿತ ಹೇಳಿಕೆಯೊಂದನ್ನು ನೀಡಿ ಬಂಧನಕ್ಕೊಳಗಾಗಿದ್ದಾರೆ.. ಪ್ರತಿಷ್ಠಿತ ಪಳನಿ ದೇಗುಲದಲ್ಲಿ ನೀಡುವ ಪಂಚಾಮೃತದಲ್ಲಿ ದುರ್ಬಲ ಮಾತ್ರ ಬಳಸುತ್ತಾರೆ ಎಂದು ಸಿನಿಮಾ ನಿರ್ದೇಶಕ ಮೋಹನ್‌ ಅವರು ಹೇಳಿಕೆ ನೀಡಿದ್ದರು.. ಈ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ..
ಖಾಸಗಿ ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿದ್ದ ಅವರು, ಸಮಯಪುರಂ ಮಾರಿಯಮ್ಮಾನ್‌ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಪಂಚಾಮೃತದಲ್ಲಿ ಮಾತ್ರೆ ಬೆರೆಸಲಾಗುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.. ಈ ಮೂಲಕ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯವಸ್ಥಾಪಕ ಕವಿ ಅರಸು ದೂರು ನೀಡಿದ್ದರು.. ಈ ಹಿನ್ನೆಲೆಯಲ್ಲಿ ನಿರ್ದೇಶಕ ಮೋಹನ್‌ರನ್ನು ಬಂಧಿಸಲಾಗಿದೆ..
ಬಂಧನವಾಗಿರುವ ತಮಿಳು ಚಿತ್ರ ನಿರ್ದೇಶಕ ಮೋಹನ್, ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.. ಅದರಲ್ಲಿ ಬಕಾಸುರನ್​, ರುದ್ರ ತಾಂಡವಮ್​, ದ್ರೌಪತಿ ಕೂಡಾ ಇವೆ..

Share Post