CrimeNational

ಚಿಕನ್‌ ಸಾಂಬಾರಿನಲ್ಲಿ ಉಪ್ಪು ಜಾಸ್ತಿಯಾಗಿದೆ ಎಂದಿದ್ದಕ್ಕೆ ಗಂಡನ ಕೊಲೆ!

ಪಾಟ್ನಾ(ಬಿಹಾರ); ಮನೆಯಲ್ಲಿ ಮಾಡಿದ್ದ ಚಿಕನ್‌ ಸಂಬಾರು ಊಟ ಮಾಡಿದ ಗಂಡ ಹೆಂಡತಿಗೆ ಉಪ್ಪು ಜಾಸ್ತಿಯಾಗಿದೆ ಎಂದು ಹೇಳಿದ್ದಾನೆ.. ಗಂಡ ಹಾಗೆ ಹೇಳುತ್ತಿದ್ದಂತೆ ಕೆರಳಿದ ಹೆಂಡತಿ ತನ್ನ ಗಂಡನ ಮೇಲೆ ದಾಳಿ ಮಾಡಿದ್ದಾಳೆ.. ರಾಡ್‌ನಿಂದ ಗಂಡನಿಗೆ ಹೊಡೆದಿದ್ದು, ಗಂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಬಿಹಾರದ ಚಂಪಾರಣ್‌ ಜಿಲ್ಲೆಯ ಚೌತರ್ವದ ಕೊಲ್ಹುವಾ ಗ್ರಾಮದಲ್ಲಿ ಘಟನೆ ನಡೆದಿದೆ..
ಇದೇ ಗ್ರಾಮದ ಶಂಶೀರ್‌ ಆಲಂ ಅಲಿಯಾಸ್‌ ಲಾಲು ಎಂಬ 35 ವರ್ಷದ ವ್ಯಕ್ತಿಯೇ ಕೊಲೆಯಾದವರು.. ಈ ಪ್ರಕರಣ ಸಂಬಂಧ ಶಂಶೀರ್‌ ಪತ್ನಿ ಶಹನಾಜ್‌ ಬೇಗಂ ಹಾಗೂ ಆಕೆಯ ಸಹೋದರಿ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಪತ್ನಿ ಶಹನಾಜ್‌ ಬೇಗಂ ಮನೆಯಲ್ಲಿ ಚಿಕನ್‌ ಸಾಂಬಾರು ಮಾಡಿದ್ದಳು.. ಮಧ್ಯಾಹ್ನ ಮನೆಗೆ ಬಂದ ಗಂಡ ಶಂಶೀರ್‌ ಊಟ ಮಾಡಿದ್ದು, ಸಾರಿನಲ್ಲಿ ಉಪ್ಪು ಜಾಸ್ತಿಯಾಗಿದೆ ಎಂದು ಹೇಳಿದ್ದಾನೆ.. ಈ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.. ಈ ವೇಳೆ ರೊಚ್ಚಿಗೆದ್ದ ಪತ್ನಿ ಶಹನಾಜ್‌ ರಾಡ್‌ ತೆಗೆದುಕೊಂಡು ಗಂಡನಿಗೆ ಹೊಡೆದಿದ್ದಾಳೆ.. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಶಂಶೀರ್‌ ಸಾವನ್ನಪ್ಪಿದ್ದಾರೆ.. ರಕ್ತಸ್ರಾವ ಆಗಿ ಶಂಶೀರ್‌ ಕಿರುಚಾಡುತ್ತಿದ್ದ.. ಇದನ್ನು ಕೇಳಿ ಅಕ್ಕಪಕ್ಕದವರು ಓಡಿಬಂದಿದ್ದಾರೆ.. ಆದ್ರೆ ಅಷ್ಟರಲ್ಲಾಗಲೇ ಶಂಶೀರ್‌ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ..
ಗಂಡನನ್ನು ಕೊಲೆ ಮಾಡಲು ಶಹನಾಜ್‌ಗೆ ಆಕೆಯ ಅಪ್ರಾಪ್ತ ಸಹೋದರಿ ಕೂಡಾ ಸಪೋರ್ಟ್‌ ಮಾಡಿದ್ದಾಳೆ ಎಂದು ತಿಳಿದುಬಂದಿದೆ.. ಆಕೆ ಕೂಡಾ ಕೋಲಿನಿಂದ ಶಂಶೀರ್‌ಗೆ ಹೊಡೆದಿದ್ದಾಳೆ ಎಂದು ತಿಳಿದುಬಂದಿದೆ..

Share Post