National

ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್‌ ಹೆಸರಿಡಬೇಕು; ಸಂಸದ ಪ್ರತಾಪ ಸಿಂಹ

ಮೈಸೂರು: ಮೈಸೂರಿಗೆ ರೈಲು ತಂದವರು ಮೈಸೂರು ಅರಸರು. ಅವರ ಹೆಸರಿನಲ್ಲಿ ಒಂದು ರೈಲು ಸಹ ಇಲ್ಲ . ಈ ವಂಶ ನಿರ್ವಂಶ ಮಾಡಿಲು ಹೋದವನ ಹೆಸರು ಯಾಕೆ…? ಟಿಪ್ಪು ಸುಲ್ತಾನ್ ಒಂದೂ ರೈಲ್ವೆ ಹಳಿಯನ್ನು ಹಾಕಿಲ್ಲ. ಹೀಗಾಗಿ ಟಿಪ್ಪು ರೈಲಿನ ಹೆಸರನ್ನ ಒಡೆಯರ್ ಎಂದು ನಾಮಕರಣ ಮಾಡಿಯೇ ತೀರುತ್ತೇವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಟಿಪ್ಪು ರೈಲಿನ ಹೆಸರು ಬದಲಾಯಿಸುವಂತೆ ಸಾಕಷ್ಟು ಜನರು ಮನವಿ ಮಾಡಿದ್ದರು. ಅಲ್ಲದೆ ಟಿಪ್ಪು ಸುಲ್ತಾನ್ ಒಂದು ಹಳಿಯನ್ನು ಹಾಕಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಒಡೆಯರ್ ಕೊಡೆಗೆ ಅಪಾರವಾಗಿದೆ. ಹೀಗಾಗಿ ರೈಲಿನ ಹೆಸರು ಬದಲಾಯಿಸಿಯೇ ತೀರುತ್ತೇವೆ ಎಂದರು.
ಇನ್ನು ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ, ಬಿಎಸ್ ವೈ ವಿಷಕಂಠನಿದ್ದಂತೆ. ಬಿಎಸ್ ವೈ ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇತ್ತು. ಪ್ರವಾಹ ಕೋವಿಡ್ ನಿಂದ ರಾಜ್ಯದ ಜನ ತತ್ತರಿಸಿದ್ದರು. ಈ ವೇಳೆ ಬಿಎಸ್ ವೈ ಎಲ್ಲಾ ಕಡೆ ಒಬ್ಬರೇ ಓಡಾಡಿ ಕೆಲಸ ಮಾಡಿದ್ದರು. ಅವರು ಜೀವ ಕಾಪಾಡಿದ್ರು ನಾವು ಜೀವನ ಕಾಪಾಡುತ್ತೇವೆ ಎಂದು ತಿಳಿಸಿದರು.

Share Post