CrimeDistricts

ಗಣೇಶನ ಮುಂದೆ ಇಟ್ಟಿದ್ದ ಹಣಕ್ಕಾಗಿ ಕಿತ್ತಾಟ!; ಸಹೋದರನ ಹತ್ಯೆ!

ಉತ್ತರ ಕನ್ನಡ; ಹಬ್ಬದ ದಿನಗ ದೇವರ ಮುಂದೆ ಇಟ್ಟ ಹಣದ ವಿಚಾರವಾಗಿ ಸಹೋದರರ ನಡುವೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.. ಹಬ್ಬದ ದಿನವೇ ಗಣೇಶನ ಮುಂದೆಯೇ ಕೊಲೆ ನಡೆದಿದೆ.. ಕಾರವಾರದ ಸಾಯಿಕಟ್ಟಾ ಎಂಬಲ್ಲಿ ಈ ಘಟನೆ ನಡೆದಿದೆ..
ಮನೆಯಲ್ಲಿ ಗಣೇಶ ಪೂಜೆ ಮಾಡಲಾಗಿತ್ತು.. ಈ ವೇಳೆ ದೇವರಿಗೆ ಇಟ್ಟ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರುವ ನಡುವೆ ಜಗಳ ನಡೆದಿದೆ.. ಈ ವೇಳೆ ಮನೀಶ್‌ ಕಿರಣ್‌ ಎಂಬಾತ ತನ್ನ ಸಹೋದರ ಸಂದೇಶ್‌ ಪ್ರಭಾಕರ್‌ನನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ..
ಕಾರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮನೀಶ್‌ ಕಿರಣ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

Share Post