CrimeNational

ವ್ಯಕ್ತಿಗೆ ಡಿಕ್ಕಿ ಹೊಡೆದು 10 ಮೀಟರ್‌ ಎಳೆದೊಯ್ದ ಕಾರು!

ದೆಹಲಿ; ವ್ಯಕ್ತಿಯೊಬ್ಬರಿಗೆ ಗುದ್ದಿದ ಕಾರು ದೇಹವನ್ನು ಸುಮಾರು ಹತ್ತು ಮೀಟರ್‌ವರೆಗೆ ಎಳೆದೊಯ್ದಿದೆ.. ದೆಹಲಿಯ ಕನ್ನಾಟ್‌ ಪ್ಲೇಸ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆ ನಂತರ ಕಾರು ಚಾಲಕ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.. ಸೆಪ್ಟೆಂಬರ್‌ 4ರಂದು ಈ ಘಟನೆ ನಡೆದಿದ್ದು, ಮರುದಿನ ಕಾರು ಚಾಲಕನನ್ನು ಬಂಧಿಸಲಾಗಿದೆ..
ಮಧ್ಯಪ್ರದೇಶ ಮೂಲಕದ ಶಿವಂ ದುಬೆ ಎಂಬಾತನೇ ಈ ಅಪಘಾತ ಮಾಡಿರುವಾತ. ಈತ ದೆಹಲಿಯ ಕನ್ನಾಟ್‌ ಪ್ಲೇಸ್‌ನಲ್ಲಿರುವ ಸ್ನೇಹಿತರನ್ನು ಭೇಟಿಯಾಗಲು ಸ್ನೇಹಿತನಿಂದ ಕಾರು ಪಡೆದು ಕಾರು ಚಲಾಯಿಸಿಕೊಂಡು ಹೋಗಿದ್ದ.. ಈ ವೇಳೆ ಅಪಘಾತ ಸಂಭವಿಸಿದೆ.. ಸ್ನೇಹಿತರನ್ನು ಭೇಟಿಯಾಗಿ ಹಿಂತಿರುಗುತ್ತಿದ್ದಾಗ, ಬಾರಾಖಂಬಾ ರೇಡಿಯಲ್‌ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ.. ಕಾರಿನ ಚಕ್ರಗಳಡಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗದೇ ಹಾಗೆಯೇ ಮುಂದಕ್ಕೆ ಕಾರು ಚಲಾಯಿಸಿದ್ದಾನೆ.. ಇದರಿಂದಾಗಿ ಲೇಖ್‌ರಾಜ್‌ ಎಂಬಾತ ಸಾವನ್ನಪ್ಪಿದ್ದಾನೆ..
ಹತ್ತು ಮೀಟರ್‌ ಮುಂದಕ್ಕೆ ಹೋದ ನಂತರ ಕಾರಿಗೆ ಸಿಲುಕಿದ್ದ ದೇಹ ಕೆಳಗೆ ಬಿದ್ದಿದೆ.. ಆದ್ರೆ ಕಾರು ಚಾಲಕ ದುಬೆ ಮಾತ್ರ ಕಾರಿನೊಂದಿಗೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.. ದೆಹಲಿಯಲ್ಲಿ ಹಿಂದೆ ಕೂಡಾ ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದವು..

Share Post