DistrictsPolitics

ಸಿದ್ದರಾಮಯ್ಯ ರಾಜೀನಾಮೆ ನೀಡೋ ಪರಿಸ್ಥಿತಿ ಗ್ಯಾರೆಂಟಿ; ಯಡಿಯೂರಪ್ಪ

ಶಿವಮೊಗ್ಗ; ಹೈಕೋರ್ಟ್‌ ಆದೇಶದ ನಂತರ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಪರಿಸ್ಥಿತಿ ಅರಿತುಕೊಂಡು ಸಿದ್ದರಾಮಯ್ಯ ಅವರು ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ..

ಇದನ್ನೂ ಓದಿ; ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ ದರ ಕೇವಲ 99 ರೂಪಾಯಿ!

ಸಿದ್ದರಾಮಯ್ಯ ವಿರುದ್ಧದ ಎಲ್ಲಾ ಆರೋಪಗಳೂ ಸಾಬೀತಾಗುತ್ತಿವೆ.. ಹೀಗಾಗಿ ಅವರು ಕಾನೂನಿನಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೊವಿಡ್‌ ಹಗರಣದ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.. ತನಿಖಾ ವರದಿ ಕೊಟ್ಟಿದ್ದಾರೆ. ಯಾವುದೇ ತೀರ್ಮಾನ ಕೈಗೊಳ್ಳಲು ಸರ್ಕಾರ ಸ್ವತಂತ್ರವಿದೆ.. ಆದ್ರೆ ನಾವು ಈ ಬಗ್ಗೆ ಯಾವುದೇ ಹೋರಾಟ ಮಾಡೋದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ..

ಇದನ್ನೂ ಓದಿ; ಕಷ್ಟಕ್ಕೆ ಸ್ಪಂದಿಸೋ ಸ್ನೇಹಿತ ಯಾರು..?; ಕಂಡುಹಿಡಿಯೋದು ಹೇಗೆ..?

Share Post