BengaluruCrime

ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಪಾತ್ರದ ಬಗ್ಗೆ ಏನೆಲ್ಲಾ ಹೇಳಲಾಗಿದೆ..?

ಬೆಂಗಳೂರು; ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3991 ಪುಟಗಳು ಸುದೀರ್ಘ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.. ಇದರಲ್ಲಿ ದರ್ಶನ್‌ ಅವರನ್ನು ಎ2 ಆರೋಪಿ ಎಂದೇ ಬಿಂಬಿಸಲಾಗಿದೆ.. ದರ್ಶನ್‌ ವಿರುದ್ಧ ಹಲವಾರು ಸಾಕ್ಷ್ಯಗನ್ನು ಕಲೆಹಾಕಿರುವ ಪೊಲೀಸರು, ದರ್ಶನ್‌ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.. ಹಾಗಾದ್ರೆ ದರ್ಶನ್‌ ವಿರುದ್ಧ ಏನೇನು ಆರೋಪಗಳಿವೆ ಅನ್ನೋದನ್ನು ನೋಡೋಣ..
ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಸಿರುವ ಆರೋಪ
ಸ್ವತಃ ನಿಂತು ಹಲ್ಲೆ ಮಾಡಿದ್ದು, ಕೊಲೆಯಾದ ಸ್ಥಳದಲ್ಲಿ ಇದ್ದದ್ದು
ಕೊಲೆ ಮಾಡಿದ ಬಳಿಕ ಅದನ್ನು ಮುಚ್ಚಿ ಹಾಕಲು ಲಕ್ಷ ಲಕ್ಷ ಹಣ ಕೊಟ್ಟಿದ್ದು
ಕೊಲೆ ನಡೆದ ಸ್ಥಳಕ್ಕೆ ಬಂದಿದ್ದು, ಹೋದದ್ದರ ಸಿಸಿಟಿವಿ ದೃಶ್ಯಾವಳಿ
ಅಂದು ದರ್ಶನ್‌ ಧರಿಸಿದ್ದ ಬಟ್ಟೆ, ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ
ಕೆಲವೊಂದು ವಿಡಿಯೋ ಹಾಗೂ ಆಡಿಯೋ ಸಾಕ್ಷ್ಯಗಳು ಕೂಡಾ ಪತ್ತೆ

Share Post