DistrictsPolitics

ಮಂಡ್ಯ ನಗರಸಭೆ ಗದ್ದುಗೆ ಹಿಡಿದ ಜೆಡಿಎಸ್‌!; ಕಾಂಗ್ರೆಸ್‌-ಜೆಡಿಎಸ್‌ ಕಿತ್ತಾಟ!

ಮಂಡ್ಯ; ಮಂಡ್ಯ ನಗರ ಸಭೆ ಚುನಾವಣೆಯ ಪ್ರತಿಷ್ಠೆಯ ಕಣವಾಗಿತ್ತು.. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿಯವರ ಜಿದ್ದಾಜಿದ್ದಿಗೆ ಕಾರಣವಾಗಿತ್ತು.. ಆದ್ರೆ, ಕಾಂಗ್ರೆಸ್‌ ನಡೆಸಿದ ಆಪರೇಷನ್‌ ಹಸ್ತದ ಪ್ರಯತ್ನ ಫಲಕೊಟ್ಟಿಲ್ಲ.. ಕುಮಾರಸ್ವಾಮಿಯರವೇ ರಿವರ್ಸ್‌ ಆರಪೇಷನ್‌ ಮಾಡಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ..

ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲು!

ಜೆಡಿಎಸ್‌ನ ನಾಗೇಶ್‌ ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.. ಕಾಂಗ್ರೆಸ್‌ನ ಒಂದು ವೋಟ್‌ ಕ್ರಾಸ್‌ ವೋಟಿಂಗ್‌ ಆಗಿದೆ ಎಂದು ಹೇಳಲಾಗುತ್ತಿದೆ.. ಇನ್ನು ಇದಕ್ಕೂ ಮೊದಲು ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಕಿತ್ತಾಟ ನಡೆಯಿತು.. ಕೇಂದ್ರ ಸಚಿವ ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದ್ದು, ಮಾತಿನ ಚಕಮಕಿ ಕೂಡಾ ನಡೆದಿದೆ.. ಮತ ಹಾಕಲು ಬಂದ ಕಾಂಗ್ರೆಸ್‌ ಸದಸ್ಯರಿದ್ದ ವಾಹನಕ್ಕೆ ಒಂದು ಕಡೆ ತಡೆ ಹಾಕಿದ್ರೆ, ಇನ್ನೊಂದು ಕಡೆ ಜೆಡಿಎಸ್‌ ಸದಸ್ಯರ ವಾಹನಕ್ಕೂ ತಡೆ ಹಾಕಲಾಗಿದೆ..

ಇದನ್ನೂ ಓದಿ; ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಸರಲ್ಲೇ ವಂಚನೆ!

ಕೊನೆಗೆ ಕುಮಾರಸ್ವಾಮಿ ಮಧ್ಯ ಪ್ರವೇಶ ಮಾಡಿ ವಾಹನ ಬಿಡಿಸುವಲ್ಲಿ ಯಶಸ್ವಿಯಾಗಿದ್ದು, ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದಾರೆ..

 

Share Post