CrimeDistricts

ಪತ್ನಿ ಸಾವು, ಕೆರೆಗೆ ಹಾರಿದ ಪತಿ!; ಪತಿಯ ಮನೆಗೆ ಬೆಂಕಿ!

ಮಂಡ್ಯ(Mandya); ಅತ್ತೆ ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇದರಿಂದ ಪತ್ನಿ ಪೋಷಕರ ದಾಳಿ ಭಯದಿಂದ ಆಕೆಯ ಗಂಡನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.. ಇದೇ ವೇಳೆ ಗೃಹಿಣಿಯ ತವರು ಮನೆಯವರು ರೊಚ್ಚಿಗೆದ್ದ ಮನೆಗೆ ಬೆಂಕಿ ಹಚ್ಚಿದ್ದಾರೆ.. ಮಂಡ್ಯ ಜಿಲ್ಲೆ ಕೆಆರ್‌ ಪೇಟೆ ತಾಲ್ಲೂಕಿನ ಗದ್ದೆಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!

21 ವರ್ಷದ ಸ್ವಾತಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇದರಿಂದಾಗಿ ಆಕ್ರೋಶಗೊಂಡ ಮೃತಳ ಪೋಷಕರು ಸ್ವಾತಿ ಗಂಡನ ಮನೆ ಮೇಲೆ ದಾಳಿ ಮಾಡಿದ್ದಾರೆ.. ಗಂಡನೇ ಸ್ವಾತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.. ಈ ಸ್ವಾತಿ ಗಂಡ ಮೋಹನ್‌ ಹಾಗೂ ಆತನ ತಂದೆ, ತಾಯಿ ಪರಾರಿಯಾಗಿದ್ದಾರೆ.. ಈ ವೇಳೆ ಸ್ವಾತಿ ಪೋಷಕರು ಮೋಹನ್‌ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಅದಕ್ಕೆ ಒಲ್ಲೆ ಪ್ರಿಯತಮ!; ಚಾಕುವಿನಿಂದ ದಾಳಿ ಮಾಡಿದ ಪ್ರಿಯತಮೆ!

ಇದೇ ವೇಳೆ ತೀವ್ರ ಭೀತಿಗೆ ಒಳಗಾಗಿದ್ದ ಮೋಹನ್‌ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಪೋಷಕರು ನಾಪತ್ತೆಯಾಗಿದ್ದಾರೆ.. ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.. ಪೊಲೀಸರು ಭದ್ರತೆ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ..

Share Post