CrimeHealthNational

ಬಸ್ಸು, ವ್ಯಾನ್‌ ಮುಖಾಮುಖಿ ಡಿಕ್ಕಿ; 10 ಮಂದಿ ದುರ್ಮರಣ, 27 ಮಂದಿ ಗಂಭೀರ!

ಲಖನೌ; ಬಸ್‌ ಹಾಗೂ ವ್ಯಾನೊಂದು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಹತ್ತು ಮಂದಿ ದುರ್ಮರಣಕ್ಕೀಡಾಗಿದ್ದಾರೆ.. ಘಟನೆಯಲ್ಲಿ 27 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಸಲೇನ್‌ಪುರ ಬಳಿ ಬದೌನ್‌ ಹಾಗೂ ಮೀರತ್‌ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಇದನ್ನೂ ಓದಿ; ಅಡ್ಜಸ್ಟ್‌ಮೆಂಟ್‌ ರಾಜಕೀಯ ಸೇಡಿನ ರಾಜಕೀಯವಾಗಿ ಬದಲಾಗ್ತಿದೆಯಾ..?

ಕೂಲಿ ಕಾರ್ಮಿಕರು ರಕ್ಷಾ ಬಂಧನದ ಹಿನ್ನೆಲೆಯಲ್ಲಿ ವ್ಯಾನ್‌ನಲ್ಲಿ ತಮ್ಮ ಊರಿಗೆ ಹೋಗುತ್ತಿದ್ದರು.. ಈ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.. ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 27 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿ ಎಂದು ಹೇಳಲಾಗುತ್ತಿದೆ.. ಸ್ಥಳಕ್ಕೆ ಬುಲಂದಶಹರ್‌ ಜಿಲ್ಲಾಧಿಕಾರಿ ಪ್ರಕಾಶ್‌ ಸಿಂಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಇದನ್ನೂ ಓದಿ; ಪ್ರಾಸಿಕ್ಯೂಷನ್‌ ವಿಚಾರ; ಪ್ರತಿಭಟನೆಗಳಿಂದ ಕಳಂಕ ದೂರವಾಗುತ್ತಾ..?

Share Post