CrimeNational

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ!

ಮೇಡ್ಚಲ್‌ (Telangana); ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳನ್ನು ಕೆರೆಗೆ ನೂಕಿ, ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ತೆಲಂಗಾಣದ ಮೇಡ್ಚಲ್‌ ಜಿಲ್ಲೆಯ ಸಮೀರ್‌ ಪೇಟೆಯಲ್ಲಿ ಈ ದುರ್ಘಟನೆ ನಡೆದಿದೆ.. ಭಾನುಪ್ರಿಯಾ ಹಾಗೂ ಮಕ್ಕಳಾದ ದೇವಂತ್‌, ದೀಕ್ಷ ಆತ್ಮಹತ್ಯೆ ಮಾಡಿಕೊಂಡವರು. ಮುಳುಗು ತಜ್ಞರು ಮೂರೂ ದೇಹಗಳನ್ನು ಹೊರತೆಗೆದಿದ್ದಾರೆ..

ಇದನ್ನೂ ಓದಿ; ಬಸ್ಸು, ವ್ಯಾನ್‌ ಮುಖಾಮುಖಿ ಡಿಕ್ಕಿ; 10 ಮಂದಿ ದುರ್ಮರಣ, 27 ಮಂದಿ ಗಂಭೀರ!

ಸಿದ್ದಪೇಟೆ ಜಿಲ್ಲೆಯ ಮುಳುಗು ಗ್ರಾಮದವರಾದ ಮಾರ್ಕಂಡೇಯ ಸ್ವಾಮಿ ಹಾಗೂ ಭಾನುಪ್ರಿಯಾ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು.. ಇವರು ಸಮೀರ್‌ಪೇಟೆಯಲ್ಲಿ ವಾಸವಿದ್ದರು.. ಇವರ ಇಬ್ಬರು ಮಕ್ಕಳಲ್ಲಿ ಪುತ್ರಿ ದೀಕ್ಷಾ ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದಳು.. ಹಲವು ಆಸ್ಪತ್ರೆಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ.. ಇದರಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿತ್ತು.. ಇದರಿಂದಾಗಿ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ಎರಡು ದಿನಗಳ ಹಿಂದೆಯೂ ಕೂಆ ಗಂಡ-ಹಂಡತಿ ನಡುವೆ ಸಣ್ಣ ಜಗಳವಾಗಿದೆ..

ಇದನ್ನೂ ಓದಿ; ಅಡ್ಜಸ್ಟ್‌ಮೆಂಟ್‌ ರಾಜಕೀಯ ಸೇಡಿನ ರಾಜಕೀಯವಾಗಿ ಬದಲಾಗ್ತಿದೆಯಾ..?

ಇದೇ ವೇಳೆ ಮಾರ್ಕಂಡೇಯಸ್ವಾಮಿ ತನ್ನ ಪತ್ನಿ ಭಾನುಪ್ರಿಯಾಗೆ ಹೊಡೆದಿದ್ದಾನೆ.. ಇದರಿಂದ ಮನನೊಂದ ಭಾನುಪ್ರಿಯಾ ಮನೆಯಿಂದ ಹೊರನಡೆದಿದ್ದು, ಇಬ್ಬರ ಮಕ್ಕಳ ಜೊತೆ ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಪತ್ನಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದ ಪತಿ, ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದ.. ಇದೀಗ ಮೂವರ ದೇಹಗಳೂ ಕೆರೆಯಲ್ಲಿ ಸಿಕ್ಕಿವೆ..

Share Post