CrimeNational

ಆಸ್ತಿಗಾಗಿ ತಂದೆ ಕಾಲು ಮುರಿಸಿದ ಮಗಳು!

ತೆಲಂಗಾಣ(Telangana); ಆ ವ್ಯಕ್ತಿ ಸಿಂಗರೇಣಿ ಗಣಿಯ ನಿವೃತ್ತ ಕಾರ್ಮಿಕ.. ಆತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಲಕ್ಷ್ಮಾರೆಡ್ಡಿ ಎಂಬಾತನನ್ನು ದತ್ತು ತೆಗೆದುಕೊಂಡು ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದ.. ಲಕ್ಷ್ಮಾರೆಡ್ಡಿಗೆ ತನ್ನ ಚಿಕ್ಕ ಮಗಳನ್ನು ಕೊಟ್ಟು ಮದುವೆ ಮಾಡಿದ್ದ.. ಇದರ ಜೊತೆ ತಾನು ಸಂಪಾದನೆ ಮಾಡಿದ ಬಹುತೇಕ ಆಸ್ತಿಯನ್ನು ಅಳಿಯನ ಹೆಸರಿಗೇ ಬರೆದಿದ್ದ.. ಆದರೂ, ಉಳಿದ ಆಸ್ತಿಗಾಗಿ ಮಗಳು, ಅಳಿಯ ಸೇರಿಕೊಂಡು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.. ಸ್ವಂತ ಮಗಳೇ ತಂದೆಯ ಎರಡೂ ಕಾಲು ಮುರಿಸಿದ್ದಾಳೆ..

ಇದನ್ನೂ ಓದಿ; ವಾಹನ ಡಿಕ್ಕಿ; ಚಿತ್ರದುರ್ಗ ಬಳಿ ಚಿರತೆ, ಕರಡಿ ಸಾವು

ತೆಲಂಗಾಣದ ಜಯಶಂಕರ್‌ ಭೂಪಾಲಪಲ್ಲಿ ಜಿಲ್ಲಾ ಕೇಂದ್ರದ ಕಾರ್ಲ್‌ ಮಾರ್ಕ್ಸ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.. ನಿವೃತ್ತ ಗಣಿ ಕಾರ್ಮಿಕ ಮಲ್ಲೇಶ್‌ ಎಂಬುವವರೇ ಎರಡೂ ಕಾಲು ಕಳೆದುಕೊಂಡವರು.. ಮಲ್ಲೇಶ್‌ ದತ್ತು ತೆಗೆದುಕೊಂಡು ಬೆಳೆಸಿದ ಅಳಿ ಲಕ್ಷ್ಮಾರೆಡ್ಡಿಗೆ ಬಹುತೇಕ ಆಸ್ತಿ ಬರೆದುಕೊಟ್ಟಿದ್ದರು.. ಮಗಳನ್ನೂ ಕೊಟ್ಟಿದ್ದರು.. ಆದರೂ ಕೂಡಾ ಮಲ್ಲೇಶ್‌ ಬಳಿ ಫಿಕ್ಸೆಡ್‌ ಡೆಪಾಸಿಟ್‌ ಹಣ ಹಾಗೂ ಎರಡು ಗುಂಟೆ ಜಾಗವಿತ್ತು.. ಇದನ್ನೂ ನಮ್ಮ ಹೆಸರಿಗೇ ಬರೆಯಬೇಕು ಎಂದು ಸ್ವಂತ ಮಗಳೆ ಪಟ್ಟು ಹಿಡಿದಿದ್ದಳು.. ಕೊಡದಿದ್ದರೆ ಸಾಯಿಸುತ್ತೇವೆ ಎಂದು ಬೆದರಿಸಿದ್ದರು..

ಇದನ್ನೂ ಓದಿ; ಮೊಬೈಲ್‌ ಬದಲು ವಾಟರ್‌ ಹೀಟರ್‌ ಕಾಯಲ್‌ ಕಿವಿಗಿಟ್ಟುಕೊಂಡು ಸಾವು!

ಆದ್ರೆ ಮಲ್ಲೇಶ್‌ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.. ಆದ್ರೆ ನಾಲ್ವರು ವ್ಯಕ್ತಿಗಳನ್ನು ಕರೆದುಕೊಂಡು ಬಂದ ಮಗಳು ಹಾಗೂ ಅಳಿಯ ಮಲ್ಲೇಶ್‌ ಮೇಲೆ ತೀವ್ರ ಹಲ್ಲೆ ಮಾಡಿಸಿದ್ದಾರೆ.. ಇದರಿಂದಾಗಿ ಎರಡೂ ಕಾಲು ಮುರಿದಿವೆ.. ಸದ್ಯ ಮಲ್ಲೇಶ್‌ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಪೊಲೀಸರು ಮಲ್ಲೇಶ್‌ ಪುತ್ರಿ ಮಹೇಶ್ವರಿ ಹಾಗೂ ಅಳಿಯ ಲಕ್ಷ್ಮಾರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

Share Post