CrimeHealthNational

ತಾಳಿ ಕಟ್ಟಿದ ಎರಡೇ ಗಂಟೆಯಲ್ಲಿ ವರ ಸಾವು..!; ಆ ಕೊಠಡಿಯಲ್ಲಿ ನಡೆದಿದ್ದಾದರೂ ಏನು..?

ಲಕ್ನೋ; ಮದುವೆಯಾಗಿ ಇನ್ನೂ ಎರಡು ಗಂಟೆಯಷ್ಟೇ ಆಗಿತ್ತು.. ತಾಳಿ ಕಟ್ಟಿದ್ದಾದ ಮೇಲೆ ಮೆರವಣಿಗೆ ಕೂಡಾ ಅದ್ದೂರಿಯಾಗಿ ನಡೆದಿತ್ತು.. ಆದ್ರೆ ಅದೇನಾಯ್ತೋ ಏನೋ ವರ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ.. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಉತ್ತರ ಪ್ರದೇಶದ ಇಟಾವಾ ಬಳಿಯ ಶಿವರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ..

ದೆಹಲಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ನೌಕರ ಜ್ಞಾನ್ ಸಿಂಗ್ ಯಾದವ್ ಅವರ ಕಿರಿಯ ಮಗ ಸತ್ಯೇಂದ್ರ ಯಾದವ್ ಎಂಬಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.. ರತನ್‌ಪುರ ಗ್ರಾಮದ ಯುವತಿಯನ್ನು ಸತ್ಯೇಂದ್ ಯಾದವ್‌ ಮದುವೆಯಾಗಿದ್ದು, ವಧು-ವರವನ್ನು ಮನೆಯವರು ಅದ್ದೂರಿ ಸ್ವಾಗತಿಸಿದ್ದರು.. ಮದುವೆ ಸಮಾರಂಭದಲ್ಲಿ ಓಡಾಡಿ ಓಡಾಡಿ ಸುಸ್ತಾಗಿದ್ದ ಎಲ್ಲರೂ ಮಧ್ಯಾಹ್ನ ಮಲಗಿಬಿಟ್ಟಿದ್ದರು.. ಇತ್ತ ವರ ಕೂಡಾ ಸಂಜೆ ವೇಳೆ 2ನೇ ಮಹಡಿಯ ಕೊಠಡಿಗೆ ಹೋಗಿದ್ದ..

ಎಷ್ಟು ಹೊತ್ತಾದರೂ ವರ ಬರದಿದ್ದಾಗ ಮನೆಯವರು ಬಾಗಿಲು ಬಡಿದಿದ್ದಾರೆ.. ಆದ್ರೆ ಆತ ಬಾಗಿಲು ತೆಗೆದಿಲ್ಲ.. ಆತಂಕದಿಂದ ಬಾಗಿಲು ಮುರಿದು ನೋಡಿದರೆ ಸತ್ಯೇಂದ್ರ ಯಾದವ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.. ಇದನ್ನು ನೋಡಿ ವಧು ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಾಳೆ..

 

Share Post