BengaluruCrime

ಅಪರಿಚಿತ ವಾಹನ ಡಿಕ್ಕಿ; ಯೂಟ್ಯೂಬರ್‌ ದಾರುಣ ಸಾವು!

ನೆಲಮಂಗಲ; ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಯೂಟ್ಯೂಬರ್‌ ದಾರುಣ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲ್ಲೂಕಿನ ಕುಲುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಲವತ್ತಮೂರು ವರ್ಷದ ವೆಂಕಟೇಶ್‌ ಎಂಬ ಯೂಟ್ಯೂಬರ್‌ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಅವರು ಕಾರಿನಲ್ಲಿ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಅಪಚಿತ ವಾಹನವೊಂದು ಡಿಕ್ಕಿ ಹೊಡೆದು ಎಸ್ಕೇಪ್‌ ಆಗಿದೆ.

ವೆಂಕಟೇಶ್‌ ಮೃತದೇಹವನ್ನು ನೆಲಮಂಗಳ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಆಕ್ಸಿಡೆಂಟ್‌ ಮಾಡಿದ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

Share Post