CinemaCrime

ರೇಣುಕಾಸ್ವಾಮಿ ಕೊಲೆ ಬಗ್ಗೆ ದರ್ಶನ್ ಪತ್ನಿ ಮೊದಲ ಪ್ರತಿಕ್ರಿಯೆ

ಬೆಂಗಳೂರು; ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಂತಾಪ ಸೂಚಿಸಿದ್ದಾರೆ.. ಇದೆ ಮೊದಲ ಬಾರಿಗೆ ಅವರು ರೇಣುಕಾಸ್ವಾಮಿ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ..

  ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಸುಳ್ಳು ಮಾಹಿತಿ ಹರಡದಂತೆ ಕೋರ್ಟ್ ನಿಂದ ತಡೆಯಜ್ಞೆ ತಂದಿರೋದಾಗಿ ಅವರು ಬರೆದುಕೊಂಡಿದ್ದಾರೆ.. ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿ ಮಾತ್ರ ಪ್ರಸಾರ ಮಾಡುವಂತೆ ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ..

  ಚಾಮುಂಡೇಶ್ವರಿ ತಾಯಿ ಹಾಗೂ ನಮ್ಮ ಕಾನೂನಿನ ಬಗ್ಗೆ ನನಗೆ ನಂಬಿಕೆ ಇದೆ. ನ್ಯಾಯಕ್ಕೆ ಜಯ ಸಿಗಲಿ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ. ಜೊತೆಗೆ ಕೋರ್ಟ್ ನಿಂದ ತಂದ ಸ್ಟೇ ಆರ್ಡರ್ ಕೂಡ ಪೋಸ್ಟ್ ಮಾಡಿದ್ದಾರೆ..

Share Post