CrimeDistrictsUncategorized

ಹಿಟಾಚಿ ಮೇಲೆ ಉರುಳಿತು ಬೃಹತ್‌ ಕಲ್ಲು; ಮಾಲೂರಿನಲ್ಲಿ ದಾರುಣ!

ಕೋಲಾರ; ಕಲ್ಲು ಗಣಿಗಾರಿಕೆ ವೇಳೆ ಹಿಟಾಚಿ ಮೇಲೆ ದೊಡ್ಡ ಕಲ್ಲೊಂದು ಉರುಳಿಬಿದ್ದು ದುರಂತ ನಡೆದಿದೆ.. ಹಿಟಾಚಿ ಆಪರೇಟ್‌ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಬೃಹತ್‌ ಕಲ್ಲು ಬಿದ್ದಿದ್ದರಿಂದ ಹಿಟಾಚಿ ಕೂಡಾ ಪಲ್ಟಿ ಹೊಡೆದಿದ್ದು, ಅದಕ್ಕೂ ಹಾನಿಯಾಗಿದೆ.. 

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಹಳೇಪಾಳ್ಯದಲ್ಲಿ ಈ ದುರ್ಘಟನೆ ನಡೆದಿದೆ.. ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್‌ ಎಂಬ ಹಿಟಾಚಿ ಆಪರೇಷರ್‌ ಸಾವನ್ನಪ್ಪಿದ್ದಾನೆ.. ಮಂಜುನಾಥ್‌ ಎಂಬುವವರಿಗೆ ಸೇರಿದ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.. \

ಗಣಿಗಾರಿಕೆ ಸ್ಥಳದಲ್ಲಿ ರಾತ್ರಿ ಭಾರಿ ಮಳೆ ಸುರಿದಿತ್ತು.. ಹೀಗಾಗಿ ಭೂಮಿ ಸಡಿಲವಾಗಿದ್ದು, ಹಿಟಾಚಿ ಮೇಲೆ ಕಲ್ಲು ಉರುಳಿಬಿದ್ದು ದುರಂತ ನಡೆದಿದೆ.. ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

 

Share Post