CrimeDistricts

ಪೊಲೀಸ್‌ ಠಾಣೆ ಎದುರೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಪೊಲೀಸ್‌ ಠಾಣೆ ಎದುರಲ್ಲೇ ಭೀಕರ ಕೊಲೆ ನಡೆದಿದೆ.. ನಗರ ಪೊಲೀಸ್‌ ಠಾಣೆಯ ಎದುರಿನ ರಸ್ತೆ ಮಧ್ಯೆದಲ್ಲೇ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.. ಎಲ್‌.ಎಂ.ಎಲ್‌.ಶೇಖರ್‌ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ಎಸ್ಕೇಪ್‌ ಆಗಿದ್ದಾರೆ..

ಕಾರ್ಖಾನೆ ಪೇಟೆ ನಿವಾಸಿಯಾಗಿರುವ ಶಿವಕುಮಾರ್‌ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ.. ಅನೈತಿಕ ಸಂಬಂಧ, ಕಿರುಕುಳ ಹಾಗೂ ಹಳೇದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ..

ಆರೋಪಿ ಶಿವಕುಮಾರ್‌ ಕೊಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ..ಚಿಕ್ಕಬಳ್ಳಾಪುರ ನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..

Share Post