CinemaLifestyle

ನಟ ದುನಿಯಾ ವಿಜಯ್‌ಗೆ ಕೋರ್ಟ್‌ನಲ್ಲಿ ಹಿನ್ನಡೆ; ವಿಚ್ಛೇದನದ ಅರ್ಜಿ ವಜಾ!

ಬೆಂಗಳೂರು; ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಕೋರಿದ್ದ ನಟ ದುನಿಯಾ ವಿಜಯ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.. ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ ದುನಿಯಾ ವಿಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.. ದುನಿಯಾ ವಿಜಯ್‌ ಅವರು ನಾಗರತ್ನ ಅವರ ವಿರುದ್ಧ ಮಾಡಿದ್ದ ಆರೋಪಗಳನ್ನು ಸಾಬೀತುಪಡಿಸಲು ಆಗಿಲ್ಲ.. ಈ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ..

2018ರಲ್ಲಿ ದುನಿಯಾ ವಿಜಯ್ ಅವರು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು.. ಆದ್ರೆ ನಾಗರತ್ನ ಅವರು ಗಂಡನನ್ನು ಬಿಡಲು ಒಪ್ಪಿರಲಿಲ್ಲ.. ಹೀಗಿರುವಾಗಲೇ ಇಂದು ಕೋರ್ಟ್‌ ಆದೇಶ ನೀಡಲು ಸಮಯ ನಿಗದಿ ಮಾಡಿತ್ತು.. ಈ ಬಗ್ಗೆ ಎಲ್ಲರ ಕುತೂಹಲ ಹೆಚ್ಚಾಗಿತ್ತು.. ಇಂದು ಕೋರ್ಟ್‌ ದುನಿಯಾ ವಿಜಯ್‌ ಅರ್ಜಿಯನ್ನು ವಜಾ ಮಾಡಿದೆ..

 

Share Post