DistrictsHealth

ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ; ಅಂಚೆ ಕಚೇರಿ ನೌಕರ ಕುಸಿದುಬಿದ್ದು ದುರ್ಮರಣ!

ವಿಜಯಪುರ; ಇತ್ತೀಚೆಗೆ ಹೃದಯಘಾತಗಳು ಹೆಚ್ಚಾಗುತ್ತಿವೆ.. ವಯಸ್ಸಿನ ಮಿತಿಯಿಲ್ಲದೇ ಎಲ್ಲಾ ವಯೋಮಾನದವರೂ ಈ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.. ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬೀಳುತ್ತಿದ್ದಾರೆ.. ಇದೇ ರೀತಿಯ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ..

ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಅಂಚೆ ನೌಕರ ಹೃದಯಘಾತಕ್ಕೆ ಬಲಿಯಾಗಿದ್ದಾರೆ.. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕುಸಿದುಬಿದ್ದು 51 ವರ್ಷದ ಯಲ್ಲಪ್ಪ ಗೋಪಾಲ್ ಭಜಂತ್ರಿ ಎಂಬುವವರು ಸಾವನ್ನಪ್ಪಿದ್ದಾರೆ..

ಇವರು ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಪ್ಯಾಕರ್ ಆಗಿ ಯಲ್ಲಪ್ಪ ಗೋಪಾಲ್ ಕೆಲಸ ಮಾಡುತ್ತಿದ್ದರು.. ಇವತ್ತೂ ಕೂಡಾ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..

 

Share Post