CrimeDistricts

ಮದುವೆ ಮಂದಿ ಇದ್ದ ಬಸ್‌ ಪಲ್ಟಿ; ಒಂಬತ್ತು ಮಂದಿಗೆ ಗಾಯ

ಬೆಳಗಾವಿ; ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಒಂಬತ್ತು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಖಾನಾಪುರ ತಾಲ್ಲೂಕಿನ ಓಲಮನಿ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ.

ಗೋವಾದ ಮಡಗಾಂವ್ ನಿಂದ ಬೈಲೂರು ಗ್ರಾಮಕ್ಕೆ ಬಸ್‌ ತೆರಳುತ್ತಿತ್ತು. ಮದುವೆ ಕಾರ್ಯಕ್ರಮಕ್ಕಾಗಿ ಬಸ್‌ ಬುಕ್‌ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇಂದು ಬೆಳಗಿನ ಜಾವ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಬಸ್‌ ಉರುಳಿಬಿದ್ದಿದ್ದರಿಂದ ಅದು ಕೊಂಚ ಜಖಂಗೊಂಡಿದೆ.

 

Share Post