CrimeDistricts

ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಯುವತಿ ಸಹೋದರನಿಗೆ ಗೊತ್ತಾಗಿ ಚಾಕುವಿನಿಂದ ಇರಿದ!

ಉತ್ತರ ಕನ್ನಡ; ಬೇಡ ಬೇಡ ಎಂದರೂ ಯುವಕನೊಬ್ಬ ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದ.. ಈ ವಿಷಯ ಗೊತ್ತಾಗಿ ಯುವತಿಯ ಸಹೋದರ ಈ ಒನ್‌ ಸೈಡ್‌ ಲವರ್‌ಗೆ ಚಾಕುವಿನಿಂದ ಇರಿದಿದ್ದಾನೆ.. ಇದರಿಂದ ತೀವ್ರ ಗಾಯಗೊಂಡಿರುವ ಯುವಕ ಆಸ್ಪತ್ರೆ ಸೇರಿದ್ದಾನೆ.. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಈ ದುರ್ಘಟನೆ ನಡೆದಿದೆ..

ಚವ್ಹಾಣ್‌ ಪ್ಲಾಟ್‌ ನಿವಾಸಿಯಾಗಿರುವ 24 ವರ್ಷದ ಮಹಮದ್‌ ಜಬೀವುಲ್ಲಾ ಎಂಬಾತನೇ ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿರುವ ಭಗ್ನ ಪ್ರೇಮಿ.. ಈತ ಹಳಿಯಾಳದ ತೇರಗಾಂವ್‌ನ ಸುಮಾರು 20 ವರ್ಷದ ಮಹಮದ್‌ ಕೈಫ್‌ ಎಂಬಾತನ ಸಹೋದರಿಯ ಹಿಂದೆ ಬಿದ್ದಿದ್ದನಂತೆ.. ಈ ವಿಚಾರ ಗೊತ್ತಾಗಿ ಮಹಮದ್‌ ಕೈಫ್‌ ಚಾಕುವಿನಿಂದ ಮಹಮದ್‌ ಜಬೀವುಲ್ಲಾಗೆ ಇರಿದಿದ್ದು, ಕೊಲೆ ಯತ್ನ ಮಾಡಿದ್ದಾನೆ.. ಆದ್ರೆ, ಅದೃಷ್ಟವಶಾತ್‌ ಮಹಮದ್‌ ಜಬೀವುಲ್ಲಾ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ..

ಮಹಮದ್‌ ಜಬೀವುಲ್ಲಾ ಹಲವು ತಿಂಗಳಿಂದ ಕೈಫ್‌ ಸಹೋದರಿಯ ಹಿಂದೆ ಬಿದ್ದು ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದನಂತೆ.. ಆರು ತಿಂಗಳ ಹಿಂದೆಯೂ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಕೂಡಾ ನಡೆದಿತ್ತು.. ಆಗ ಹಿರಿಯರ ಸಮ್ಮುಖದಲ್ಲಿ ವೈಮನಸ್ಯ ಶಮನ ಮಾಡಲಾಗಿತ್ತು.. ಇದಾದ ಮೇಲೂ ಜಬೀವುಲ್ಲ, ಆ ಯುವತಿಯ ಹಿಂದೆ ಬೀಳೋದನ್ನು ಬಿಟ್ಟಿರಲಿಲ್ಲವಂತೆ.. ಈ ಕಾರಣದಿಂದ ಆಕ್ರೋಶಗೊಂಡಿದ್ದ ಕೈಫ್‌, ನಿನ್ನೆ ಸಂಜೆ ಜಬೀವುಲ್ಲಾನನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ್ದಾನೆ. ಈ ಬಗ್ಗೆ ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Share Post