BengaluruCrime

ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪ; ಎರಡೂವರೆ ಲಕ್ಷ ಎಗರಿಸಿದನಾ ಗಾರ್ಡ್‌..?

ಬೆಂಗಳೂರು; ಹಣ ಡ್ರಾ ಮಾಡಲು ಸಹಾಯ ಮಾಡುವ ನಾಟಕವಾಡಿ ಎರಡೂವರೆ ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ವೃದ್ಧರೊಬ್ಬರಿಗೆ ಎಟಿಎಂನ ಸೆಕ್ಯೂರಿಟಿ ಗಾರ್ಡ್‌ ಈ ವಂಚನೆ ಮಾಡಿದ್ದು, ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

ನಿವೃತ್ತ ಖಾಸಗಿ ಕಂಪನಿ ನೌಕರ ಪೀಣ್ಯದ ಚಿಕ್ಕರಂಗಯ್ಯ ಅವರೇ ಹಣ ಕಳೆದುಕೊಂಡವರು. ಮನೆಯ ಬಳಿಯ ಎಟಿಎಂನಲ್ಲಿ ಇವರು ಹಣ ಡ್ರಾ ಮಾಡಲು ಹೋಗಿದ್ದಾರೆ. ಈ ವೇಳೆ ಅವರಿಗೆ ಹಣ ಡ್ರಾ ಮಾಡಲು ಕಷ್ಟವಾಗಿದೆ. ಹೀಗಾಗಿ ಎಟಿಎಂ ಸೆಕ್ಯೂರಿಟಿ ಗಾರ್ಡ್‌ ಹಣ ಡ್ರಾ ಮಾಡಿಕೊಡುವ ನಾಟಕವಾಡಿದ್ದಾರೆ. ಈ ವೇಳೆ ಚಿಕ್ಕರಂಗಯ್ಯ ಅವರಿಗೆ ಗೊತ್ತಾಗದಂತೆ ಎರಡೂವರೆ ಲಕ್ಷ ರೂಪಾಯಿಯಷ್ಟು ಎಗರಿಸಿದ್ದಾನಂತೆ.

ಆದ್ರೆ ಅದು ಚಿಕ್ಕರಂಗಯ್ಯಗೆ ಗೊತ್ತಾಗಿಲ್ಲ. ಇದೀಗ ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ಸೇರಿದ್ದಾರೆ. ಈ ವೇಳೆ ಅಕೌಂಟ್‌ ಪರಿಶೀಲನೆ ಮಾಡಿದಾಗ ಎರಡೂವರೆ ಲಕ್ಷ ರೂಪಾಯಿ ಕಾಣೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಚಿಕ್ಕರಂಗಯ್ಯ ಸೈಬರ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಚಿಕ್ಕರಂಗಯ್ಯ ಆರೋಪ ಮಾಡಿದ್ದಾರೆ.

Share Post