CrimeDistricts

ಹಣ ಬಿಡುಗಡೆ ಮಾಡದಿದ್ದಕ್ಕೆ ಬೇಸರ; ತುಂಡು ಗುತ್ತಿಗೆದಾರ ಆತ್ಮಹತ್ಯೆ!

ದಾವಣಗೆರೆ; ಒಂದು ವರ್ಷವಾದರೂ ಗುತ್ತಿಗೆ ಕೆಲಸ ಮಾಡಿದ್ದ ಹಣ ರಿಲೀಸ್‌ ಮಾಡದಿದ್ದುದರಿಂದ ಬೇಸತ್ತು ತುಂಡು ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಕಾಂಗ್ರೆಸ್‌ ಕಾರ್ಯಕರ್ತನೂ ಆಗಿರುವ ತುಂಡು ಗುತ್ತಿಗೆದಾರ 54 ವರ್ಷದ ಪ್ರಸನ್ನ ಗೌಡರ್‌ ಆತ್ಮಹತ್ಯೆ ಮಾಡಿಕೊಂಡವರು… ಇವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಮೇ 26ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಈಗ ಬೆಳಕಿಗೆ ಬಂದಿದೆ.. ಅವರ ಸಾವಿಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರ ಗುತ್ತಿಗೆ ಹಣದ ಬಗ್ಗೆ ಬರೆದುಕೊಂಡಿದ್ದಾರೆ..

2023 ಫೆಬ್ರವರಿಯಲ್ಲಿ ಸಂತೆಬೆನ್ನೂರು ರೈತ ಸಂಪರ್ಕ ಕೇಂದ್ರಕ್ಕೆ ಸಿಮೆಂಟ್ ಬೆಡ್ ಹಾಕುವ ಕೆಲಸ ಮಾಡಿದ್ದು, ಇದಕ್ಕೆ 5 ಲಕ್ಷ ರೂಪಾಯಿ ತುಂಡು ಗುತ್ತಿಗೆ ಪಡೆಯಲಾಗಿತ್ತು.. ಆದ್ರೆ ಒಂದು ವರ್ಷವಾದರೂ ಲ್ಯಾಂಡ್ ಆರ್ಮಿ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎಂದು ಡೆತ್‌ನೋಟ್‌ನಲ್ಲಿ ಆರೋಪ ಮಾಡಲಾಗಿದೆ..

ಒಂದು ವರ್ಷದಿಂದ ಅಧಿಕಾರಿಗಳು ಅಲೆದಾಡಿಸಿದ್ದಾರೆ.. ಎಷ್ಟು ಬಾರಿ ಬೇಡಿಕೊಂಡರೂ ಹಣ ಬಿಡುಗಡೆ ಮಾಡಿಲ್ಲ.. ಹೀಗಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ..

 

Share Post