CrimeHealthNational

ಕಲ್ಲು ಕ್ವಾರಿ ಕುಸಿದು ಭಾರೀ ದುರಂತ!; 7 ಕಾರ್ಮಿಕರ ದಾರುಣ ಸಾವು!

ಮಿಜೋರಾಂ; ಮಿಜೋರಾಂನಲ್ಲೂ ಭಾರೀ ದುರಂತ ಸಂಭವಿಸಿದೆ.. ರೆಮಲ್ ಚಂಡಮಾರುತದ ಅಬ್ಬರದಿಂದಾಗಿ ಕಲ್ಲು ಕ್ವಾರಿಯೊಂದು ಕುಸಿದುಬಿದ್ದಿದ್ದು ಭಾರೀ ಅನಾಹುತ ಸಂಭವಿಸಿದೆ.. ಮಿಜೋರಾಂನ ಐಜ್ವಾಲ್‌ ಜಿಲ್ಲೆಯ ಮೆಲ್ತುಮ್ ಮತ್ತು ಹ್ಲಿಮೆನ್ ನಡುವಿನ ಪ್ರದೇಶದಲ್ಲಿ ಕಲ್ಲು ಕ್ವಾರಿ ಕುಸಿದುಬಿದ್ದು ದುರಂತ ನಡೆದಿದೆ.. ಘಟನೆಯಲ್ಲಿ ಏಳು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ..

ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಇಂದು ಬೆಳಗ್ಗೆಯಿಂದ ಈ ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತತಿದೆ.. ಇದರಿಂದಾಗಿ ಭೂಕುಸಿತವಾಗುತ್ತಿದೆ.. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಕೂಡಾ ಭೂಕುಸಿತ ಉಂಟಾಗಿದೆ.. ಇನ್ನು ಕಲ್ಲು ಕ್ವಾರಿಯಲ್ಲಿ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.. ಅವರಿಗಾಗಿ ಮಳೆಯಲ್ಲೇ ರಕ್ಷಣಾ ಕಾರ್ಯಾವರಣೆ ಡನೆಸಲಾಗುತ್ತಿದೆ..

ಭೂಕುಸಿತದಿಂದಾಗಿ ಮಿಜೋರಾಂನ ಹಲವು ಕಡೆ ಹೆದ್ದಾರಿಗಳು ಬಂದ್‌ ಆಗಿವೆ.. ವಾಹನ ಓಡಾಟ ಸ್ಥಗಿತಗೊಂಡಿದೆ.. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.. ಶಾಲಾ-ಕಾಲೇಜುಗಳನ್ನು ಕೂಡಾ ಮುಚ್ಚಲಾಗಿದೆ..

 

Share Post