CrimeDistricts

ಜಮೀನು ವಿವಾದಕ್ಕೆ ಎರಡು ಕುಟುಂಬಗಳ ಬಡಿದಾಟ; ದೊಣ್ಣೆಗಳಿಂದ ತೀವ್ರ ಹಲ್ಲೆ!

ತುಮಕೂರು; ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.. ಈ ವೇಳೆ ದಂಪತಿ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ.

  ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿಪ್ಪಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ರಂಗಸ್ವಾಮಿ ಹಾಗೂ ಪತ್ನಿ ಲೀಲಾವತಿ ಮೇಲೆ ಹಲ್ಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ..ಮುದ್ದುರಂಗಚಾರ್ ಹಾಗೂ ಕುಟುಂಬದ ವಿರುದ್ದ ಈ ಆರೋಪ ಮಾಡಲಾಗಿದೆ..

   ಗ್ರಾಮದ ಸರ್ವೆ ನಂಬರ್ 41-42 ರ ಜಮೀನು ‌ನಮಗೆ ಸೇರಬೇಕೆಂದು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.. ಜಮೀನು ವಿವಾದ ಸದ್ಯ ಕೋರ್ಟ್ ನಲ್ಲಿದ್ದರೂ ಎರಡು ಕುಟುಂಬಗಳು ಕಿತ್ತಾಡಿಕೊಂಡಿವೆ..

   ಜಮೀನು ವಿವಾದ ಕೋರ್ಟ್‌ನಲ್ಲಿದ್ದರೂ ಉಳುಮೆ ಮಾಡಲು ಮುದ್ದುರಂಗಚಾರ್ ಕುಟುಂಬ ಬಂದಿತ್ತು.. ಈ ವೇಳೆ ಜಗಳ ನಡೆದಿದೆ. ಘಟನೆಯಲ್ಲಿ ರಂಗಸ್ವಾಮಿ ತಲೆಗೆ ಪೆಟ್ಟಾಗಿದೆ.. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post