CrimeDistricts

Shimoga Clash; ಶಿವಮೊಗ್ಗದಲ್ಲಿ ಮತ್ತೆ ಎರಡು ಕೋಮುಗಳ ನಡುವೆ ಕಿತ್ತಾಟ!

ಶಿವಮೊಗ್ಗ; ವರ್ಷದ ಹಿಂದೆ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಯ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಅನಂತರವೂ ಹಲವು ಅಹಿತಕರ ಘಟನೆಗಳು ನಡೆದಿದ್ದವು. ಇದೀಗ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ಗುಂಪುಗಳ ನಡುವೆ ಕಿತ್ತಾಟ ನಡೆದಿದೆ.

ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ. ಶಿವಮೊಗ್ಗದ ಜಂಬರಘಟ್ಟ ಗ್ರಾಮದಲ್ಲಿ ಮರ ಕಡಿದರು ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಮಸೀದಿಯಲ್ಲಿ ಕೂಡಿಹಾಕಲಾಗಿತ್ತು. ಈ ವಿಚಾರ ತಿಳಿದ ಮತ್ತೊಂದು ಕೋಮಿನ ಗುಂಪು ಅಲ್ಲಿಗೆ ಹೋಗಿದೆ. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿ ಚಕಮಕಿ ನಡೆದಿದೆ.

ಯುವಕರನ್ನು ಬಿಡಿಸಲು ಹೋದ ಗುಂಪಿನ ಮೇಲೆ ಮತ್ತೊಂದು ಕೋಮಿನವರು ಹಲ್ಲೆ ಮಾಡಿದಾರೆ ಎಂಬ ಆರೋಪ ಕೇಳಿಬಂದಿದೆ. ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಇದರಿಂದಾಗಿ ನೂರಾರು ಜನರು ಹೊಳೆಹೊನ್ನೂರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ರಾತ್ರಿಯಿಡೀ ಈ ವಿಚಾರವಾಗಿ ಜಗಳ ನಡೆದಿದೆ. ಪೊಲೀಸರು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈಓ ಘಟನೆಯಿಂದಾಗಿ ಶಿವಮೊಗ್ಗದಲ್ಲಿ ಮತ್ತೆ ಭೀತಿ ಉಂಟಾಗಿದೆ. ಪೊಲೀಸರಿಗೂ ಈ ಘಟನೆ ತಲೆನೋವಾಗಿ ಪರಿಣಮಿಸಿದೆ.

 

Share Post