CrimeDistricts

9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ನಾಶ ಮಾಡಿದ ದುಷ್ಕರ್ಮಿಗಳು!

ರಾಯಚೂರು; ದ್ವೇಷ ಏನೇನೆಲ್ಲಾ ಮಾಡಿಸುತ್ತೆ ಅನ್ನೋದು ಈ ಸ್ಟೋರಿ ಕೂಡಾ ಒಂದು ಉದಾಹರಣೆ. ಯಾಕಂದ್ರೆ ಇಲ್ಲಿ ದೂರದ ಸಂಬಂಧಿಕರಿಗೆ ಒಂಬತ್ತು ಎಕರೆಯಲ್ಲಿ ಬೆಳೆದಿದ್ದ ಹತ್ತಿಗೆ ಬೆಳೆಯನ್ನು ನಾಶ ಮಾಡಿದ್ದಾರೆ. ಟ್ರ್ಯಾಕ್ಟರ್‌ ಮೂಲಕ ಎಲ್ಲಾ ಬೆಳೆಯನ್ನೂ ಹಾಳು ಮಾಡಿದ್ದಾರೆ. ಮಾನ್ವಿ ತಾಲ್ಲೂಕಿನ ಕುರಡಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ನರಸಿಂಹ ಹಾಗೂ ಹುಲಿಗೆಪ್ಪ ಎಂಬುವವರು ಈ ಬೆಳೆಯನ್ನು ಬೆಳೆದಿದ್ದರು. ಮಳೆ ಕಡಿಮೆಯಾದರೂ ಕೂಡಾ ಬೆಳೆ ಹುಲುಸಾಗಿ ಬೆಳೆದಿತ್ತು. ನಾಲ್ಕು ತಿಂಗಳ ಹತ್ತಿ ಗಿಡಗಳು ಕಾಯಿ ಕಟ್ಟಿದ್ದವು. ಆದ್ರೆ, ಅಬ್ರಾಹಂಪ್ಪ, ಮಾರೆಪ್ಪ, ಪ್ರಭಾಕರ್ ಸೇರಿ ಹಲವರು ಎಲ್ಲರೆದುರೇ ಕ್ಯಾತೆ ತೆಗೆದು ಟ್ರ್ಯಾಕ್ಟರ್‌ ಮೂಲಕ ಬೆಳೆ ನಾಶ ಮಾಡಿದ್ದಾರಂತೆ.

ಎಕರೆಗೆ ಸರಾಸರಿ 30 ಸಾವಿರ ರೂಪಾಯಿ ಖರ್ಚು ಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post