Bengaluru

Karnataka Bandh; ಬಂದ್‌ ಬೇಕಿರಲಿಲ್ಲ, ಆದರೂ ಶಾಂತಿಯುತ – ಡಿ.ಕೆ.ಶಿವಕುಮಾರ್‌

ಬೆಂಗಳೂರು; ಇವತ್ತು ಕರ್ನಾಟಕ ಬಂದ್‌ ಬೇಕಿರಲಿಲ್ಲ. ಆದರೂ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ರಕ್ಷಣೆ ಮಾಡಲು ನಮ್ಮ ಪೊಲೀಸರಿದ್ದಾರೆ ಎಂದು ಹೇಳಿದ್ದಾರೆ.

ವಾಹನಗಳು ಓಡಾಡುತ್ತಿವೆ. ಅಂಗಡಿ-ಮುಂಗಟ್ಟುಗಳು ಕೂಡಾ ಓಪನ್‌ ಇವೆ. ಇಂದು CWMA ಸಭೆ ದೆಹಲಿಯಲ್ಲಿ ನಡೆಯುತ್ತೆ. ರಾಜ್ಯದ ಪರವಾಗಿ ದೆಹಲಿಯ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ. ಜೊತೆಗೆ ಸಂಜೆ ಕಾನೂನು ತಜ್ಞರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ ಎಂದು ಡಿಕೆಶಿ ಇದೇ ವೇಳೆ ಹೇಳಿದರು.

Share Post