BengaluruCrime

33ನೇ ಮಹಡಿಯಿಂದ ಜಾರಿಬಿದ್ದು ಟೆಕ್ಕಿ ದಾರುಣ ಸಾವು!

ಬೆಂಗಳೂರು; ಸಿಗರೇಟ್‌ ಸೇದಲೆಂದು ಅಪಾರ್ಟ್‌ಮೆಂಟ್‌ ನ 33ನೇ ಫ್ಲೋರ್‌ನ ಬಾಲ್ಕನಿಗೆ ಬಂದಿದ್ದ ಟೆಕ್ಕಿಯೊಬ್ಬ ಆಯತಪ್ಪಿ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಕೆಆರ್‌ ಪುರಂ ಬಳಿಯ ಕೊಡಿಗೇಹಳ್ಳಿಯಲ್ಲಿ ನಿನ್ನೆ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಟೆಕ್ಕಿ ದಿಪಾಂಶು ಶರ್ಮಾ ಸಾವನ್ನಪ್ಪಿದ ದುರ್ದೈವಿ. ದಿಪಾಂಶು ನಿನ್ನೆ ಸ್ನೇಹಿತರ ಜೊತೆ ಫ್ಲ್ಯಾಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಆತ ಸಿಗರೇಟ್‌ ಸೇದಲೆಂದು ಬಾಲ್ಕನಿಗೆ ಬಂದಿದ್ದಾನೆ. ಈ ವೇಳೆ ಆಯತಪ್ಪಿದ್ದು, 33ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.

ಎತ್ತರದಿಂದ ಬಿದ್ದ ಕಾರಣ ದೀಪಾಂಶು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆ.ಆರ್‌.ಪುರಂ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Share Post