CrimeDistricts

ಹಳ್ಳಿ ಗುಗ್ಗು ಎಂದ ಪತ್ನಿ; ಮನನೊಂದು ಗಂಡ ಆತ್ಮಹತ್ಯೆ

ತುಮಕೂರು; ನೀನು ಹಳ್ಳಿ ಗುಗ್ಗು, ನಿನ್ನ ಮದುವೆಯಾಗೋಕೆ ನನಗೆ ಇಷ್ಟವಿರಲಿಲ್ಲ ಎಂದ ಪತ್ನಿಯ ಮಾತಿನ ಮನನೊಂದು ಗಂಡನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಬಳಿ ನಡೆದಿದೆ. ಇಲ್ಲಿ ಕೆಬಿ ಕ್ರಾಸ್‌ನ ಕುಂದೂರು ಪಾಳ್ಯದ ಮಂಜುನಾಥ್‌ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 

ಅಂದಹಾಗೆ ಮಂಜುನಾಥ್‌ ಕೂಡಾ ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದರು. ಹತ್ತು ವರ್ಷದ ಹಿಂದೆ ಮಂಜುನಾಥ್‌ ಅವರು ತುರುವೇಕೆರೆ ಮೂಲದ ಪ್ರಿಯಾಂಕ ಎಂಬುವವರನ್ನು ಮದುವೆಯಾಗಿದ್ದರು. ಆದ್ರೆ ಮದುವೆಯಾದಾಗಿನಿಂದಲೂ ಇಬ್ಬರ ನಡುವೆ ಮನಸ್ತಾಪಗಳು ಬರುತ್ತಿದ್ದವು. ಪ್ರಿಯಾಂಕಾ ತನ್ನ ಗಂಡನನ್ನು ಹಿಡಿದು ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗೋಕೆ ಇಷ್ಟವೇ ಇರಲಿಲ್ಲ ಎಂದು ಮೂದಲಿಸುತ್ತಿದ್ದಳಂತೆ. ಇದರಿಂದ ಮನನೊಂದು ಗಂಡ ಮಂಜುನಾಥ್‌ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಂಜುನಾಥ್‌ ತನ್ನ ಸಹೋದರನಿಗೆ ಆಡಿಯೋ ಮಾಡಿ ಮಸೇಜ್‌ ಕಳುಹಿಸಿದ್ದಾನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ಆಕೆಯ ಜೊತೆ ಜೀವನ ಮಾಡೋದಕ್ಕೆ ಆಗುತ್ತಿಲ್ಲ. ನಾನು ಸಾಯುತ್ತಿದ್ದೇನೆ ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ಈ ಸಂಬಂಧ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

 

Share Post