CrimeDistricts

ಮೆಟ್ರೋ ಪಿಲ್ಲರ್‌ಗೆ ಬಲಿ ಪ್ರಕರಣ; ಇಂದು ತಾಯಿ-ಮಗುವಿನ ಅಂತ್ಯಕ್ರಿಯೆ

ದಾವಣಗೆರೆ; ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಬಿದ್ದು ಸಾವನ್ನಪ್ಪಿದ್ದ ತಾಯಿ ಹಾಗೂ ಮಗುವಿನ ಅಂತ್ಯಕ್ರಿಯೆ ಇಂದು ನಡೆಯಲಿದೆ. ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿ ವೈಕುಂಠಧಾಮದಲ್ಲಿ ತಾಯಿ ತೇಜಸ್ವಿನಿ ಅಂತ್ಯಕ್ರಿಯೆ ನಡೆದರೆ, ಬಾಟಲಿ ಬಿಲ್ಡಿಂಗ್‌ ಹಿಂಭಾಗದ ಸ್ಮಶಾನದಲ್ಲಿ ಮುಗಿವಿನ ಅಂತ್ಯಕ್ರಿಯೆ ನಡೆಯುತ್ತೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದಾವಣಗೆರೆಯ ಕುಂದವಾಡ ರಸ್ತೆಯ ಬಸವೇಶ್ವರ ನಗರದಲ್ಲಿ ತೇಜಸ್ವಿನಿಯವರ ತವರು ಮನೆ ಇದೆ. ಇಲ್ಲಿ ಮೊದಲಿಗೆ ಪಾರ್ಥಿನ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ವೇಳೆಗೆ ಇಬ್ಬರು ಅಂತ್ಯಕ್ರಿಯೆ ನಡೆಯಲಿದೆ.

ಗದಗ ಮೂಲದ ಸಿವಿಲ್‌ ಎಂಜಿನಿಯರ್‌ ಲೋಹಿತ್‌ ಅವ್ರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ಅವ್ರು ಪತ್ನಿ ತೇಜಸ್ವಿನಿ ಹಾಗೂ ಮಕ್ಕಳೊಂದಿಗೆ ಬೈಕ್‌ನಲ್ಲಿ ಹೆಣ್ಣೂರು ಬಳಿ ಹೊರಟಿದ್ದರು. ಈ ವೇಳೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿದುಬಿದ್ದಿದೆ. ಘಟನೆಯಲ್ಲಿ ತೇಜಸ್ವಿನಿ ಹಾಗೂ ಮಗು ವಿಹಾನ್‌ ಸಾವನ್ನಪ್ಪಿದ್ದರು. ಲೋಹಿತ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ವರ್ಷದ ವಿಸ್ಮಿತಾ ಬದುಕುಳಿದಿದ್ದಾಳೆ.

Share Post