Districts

ಶಕ್ತಿಧಾಮದಲ್ಲಿ ಸ್ವಾತಂತ್ರ್ಯ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ಶಿವಣ್ಣ

ಮೈಸೂರು; ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಂತೆ ಮೈಸೂರಿನ ಶಕ್ತಿಧಾಮದಲ್ಲೂ ವಿಜೃಂಬಣೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಿದರು.

ಶಿವರಾಜ್‌ ಕುಮಾರ್‌ ಜೊತೆ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕೂಡಾ ಉಪಸ್ಥಿತರಿದ್ದರು. ಶಕ್ತಿಧಾಮದ ಮಕ್ಕಳು ತುಂಬು ಹೃದಯದಿಂದ ಶಿವರಾಜ್‌ಕುಮಾರ್‌ ದಂಪತಿಯನ್ನು ಸ್ವಾಗತ ಮಾಡಿದರು. ರಾಜ್‌ಕುಮಾರ್‌ ಕುಟುಂಬದವರು ಮೈಸೂರಿನಲ್ಲಿ ದಶಕಗಳ ಹಿಂದೆ ಅನಾಥ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದಿದೆ. ಇಲ್ಲಿ ನೂರಾರು ಹೆಣ್ಣ ಮಕ್ಕಳಿಗೆ ಆಶ್ರಯ ನೀಡಿರುವುದಲ್ಲದೆ, ಉತ್ತಮ ಶಿಕ್ಷಣ ನೀಡಲಾಗುತ್ತಿದೆ.

Share Post