CrimeDistricts

ರಾಜಕೀಯ ವೈಷಮ್ಯ; ಮದ್ದೂರಲ್ಲಿ ಜೆಡಿಎಸ್‌ ಮುಖಂಡನ ಹತ್ಯೆಗೆ ಯತ್ನ

ಮಂಡ್ಯ; ಮೊನ್ನೆಯಷ್ಟೇ ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ಆಪ್ತ ಹಾಗೂ ಉದ್ಯಮಿಯೊಬ್ಬರನ್ನು ಕೊಲೆ ಮಾಡಲಾಗಿತ್ತು. ಇದೀಗ ಮಂಡ್ಯ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಪ್ರಯತ್ನ ನಡೆದಿದೆ. ಜೆಡಿಎಸ್‌ ಮುಖಂಡ ಅಪ್ಪುಗೌಡ ಎಂಬುವವರ ಹತ್ಯೆಗೆ ಯತ್ನಿಸಲಾಗಿದೆ.

ಮದ್ದೂರು ಆಂಜನೇಯಸ್ವಾಮಿ ದೇಗುಲದಲ್ಲೇ ಕೊಲೆಗೆ ಯತ್ನ ಮಾಡಲಾಗಿದೆ. ಇಬ್ಬರು ದುಷ್ಕರ್ಮಿಗಳು ಡ್ಯಾಗರ್‌ ಮೂಲಕ ಅಪ್ಪುಗೌಡರಿಗೆ ಚುಚ್ಚಿದ್ದಾರೆ. ಅಪ್ಪುಗೌಡ ಅವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪ್ಪುಗೌಡರು ಜೆಡಿಎಸ್‌ ಮುಖಂಡರಾಗಿದ್ದು, ಮದ್ದೂರು ಪರಸಭಾ ಸದಸ್ಯೆ ಪ್ರಿಯಾಂಕಾ ಅವರ ಪತಿಯಾಗಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಪರಾರಿಯಾಗಿದ್ದು, ಮದ್ದೂರು ಪೊಲೀಸರು ಆರೋಪಿಗಳಿಗಾಗಿ ತಲಾಷ್‌ ನಡೆಸಿದ್ದಾರೆ.

 

Share Post