BengaluruCrime

ಮಹಿಳೆಗೆ ಕಿರುಕುಳ ಆರೋಪ; ಸ್ವಯಂಕೃಷಿ ವೀರೇಂದ್ರ ಬಾಬು ಅರೆಸ್ಟ್‌

ಬೆಂಗಳೂರು; ಸ್ವಯಂ ಕೃಷಿ ಹೆಸರಿನಲ್ಲಿ ಹಲವು ಉದ್ಯಮಗಳನ್ನು ನಡೆಸುತ್ತಿದ್ದ, ಸ್ವಯಂ ಕೃಷಿ ಹೆಸರಿನ ಸಿನಿಮಾ ಕೂಡಾ ಮಾಡಿದ್ದ ವೀರೇಂದ್ರ ಬಾಬು ಎಂಬಾತನನ್ನು ಮಹಿಳೆಗೆ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಕೊಡಿಗೇಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಬ್ಲ್ಯಾಕ್‌ ಮೇಲ್‌ ಆರೋಪದಡಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ವೀರೇಂದ್ರ ಬಾಬುನನ್ನು ಬಂಧಿಸಲಾಗಿದೆ. 2021ರಲ್ಲಿ ವೀರೇಂದ್ರ ಬಾಬುಗೆ ಮಹಿಳೆಯೊಬ್ಬರು ಪರಿಚತರಾಗಿದ್ದು, ಆಕೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಲಾಗಿದೆಯಂತೆ. ಜೊತೆಗೆ ಅದರ ವಿಡಿಯೋ ಮಾಡಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ವಿಡಿಯೋ ರಿಲೀಸ್‌ ಮಾಡುವುದಾಗಿ ಬೆದರಿಸಿ ಮಹಿಳೆಯಿಂದ ಸುಮಾರು 15 ಲಕ್ಷ ರೂಪಾಯಿ ಹಣ ವಸೂಲಿ ಮಾಡಲಾಗಿದೆಯಂತೆ. ಆದರೂ ಆರೋಪಿ ಮತ್ತೆ ಮತ್ತೆ ಮಹಿಳೆಯಿಂದ ಹಣ ಕೇಳುತ್ತಿದ್ದ ಎಂದು ತಿಳಿದುಬಂದಿದೆ. ಜುಲೈ 30ರಂದು ಕೂಡಾ ಮಹಿಳೆಯನ್ನು ಕರೆಸಿಕೊಂಡು ತಲೆಗೆ ಗನ್‌ ಇಟ್ಟು, ಮೈಮೇಲಿದ್ದ ಚಿನ್ನಾಭರಣ ಕಸಿದುಕೊಂಡಿದ್ದನೆಂದು ಆರೋಪಿಸಲಾಗಿದೆ.

ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

 

Share Post