BengaluruPolitics

ಬಿಜೆಪಿಯವರು ಎಷ್ಟೇ ಕೂಗಾಡಲಿ, ಎಲ್ಲಾ ಬಿಚ್ಚಿಡುತ್ತೇವೆ; ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಟೆಂಡರ್‌ ಕರೆದು ಬಿಜೆಪಿಯವರು ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಬಿಜೆಪಿಯವರು ಎಷ್ಟೇ ಕೂಗಾಡಲಿ, ಅವರು ಏನು ಮಾಡಿದ್ದಾರೆ ಅನ್ನೋದನ್ನು ಎಲ್ಲವೂ ಬಿಚ್ಚಿಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮೊದಲೇ ನಾನು ಎಚ್ಚರಿಕೆ ನೀಡಿದ್ದೆ ಎಂದು ಹೇಳಿದರು.

ಟೆಂಡರ್‌ ವಹಿಸಿಕೊಳ್ಳುವಾಗ ಎಚ್ಚರಿಕೆ ಅಂತ ನಾನು ಹೇಳಿದ್ದೆ. ಈಗ ನಾವು ಎಲ್ಲವನ್ನೂ ಬಿಚ್ಚಿಡುತ್ತೇವೆ. ಆರ್‌ಆರ್‌ ನಗರ ಎಂಜಿನಿಯರ್‌ಗಳ ಕತೆ ಗೊತ್ತಲ್ವಾ..?. ಕೆಲಸವನ್ನೇ ಮಾಡದೇ 123 ಕೋಟಿ ರೂಪಾಯಿ ದುಡ್ಡು ಹೊಡೆದಿದ್ದಾರೆ. ಎಸ್‌ಐಟಿ ಮಾಡಿ ಇಂತಹ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆ ಮಾಡಿಸುವ ಚಿಂತನೆ ಇದೆ ಎಂದೂ ಡಿ.ಕೆ.ಶಿವಕುಮಾರ್‌ ಹೇಳಿದರು.

Share Post