DistrictsPolitics

ತೆಪ್ಪದಲ್ಲಿ ವಿಹಾರ ನಡೆಸಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇವತ್ತು ರಜೆ ಮೂಡ್‌ನಲ್ಲಿದ್ದರು. ತೆಪ್ಪದಲ್ಲಿ ವಿಹಾರ ನಡೆಸಿ ಎಂಜಾಯ್‌ ಮೂಲಕ ಡಿ.ಕೆ.ಶಿವಕುಮಾರ್‌ ಗಮನ ಸೆಳೆದಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಪಾದಯಾತ್ರೆ ನಡೆಸಲು ಕೂಡಾ ಕಾಂಗ್ರೆಸ್‌ ನಾಯಕರು ಸಿದ್ಧತೆ ನಡೆಸಿದ್ದಾರೆ. ಹೀಗಿರುವಾಗಲೇ ಡಿ.ಕೆ.ಶಿವಕುಮಾರ್‌ ಇಂದು ಸಂಗಮಕ್ಕೆ ಭೇಟಿ ನೀಡಿ ನೀರಿನಲ್ಲಿ ಎಂಜಾಯ್‌ ಮಾಡಿದರು. ತಾವೇ ತೆಪ್ಪವನ್ನು ಮುನ್ನಡೆಸಿದರು.


ಅನಂತರ ಉದ್ದೇಶಿತ ಮೇಕದಾಟು ಯೋಜನೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಲ್ಲೂ ಕೂಡಾ ನೀರಿಗಿಳಿದು ಸ್ವಲ್ಪ ಹೊತ್ತು ಕಳೆದರು. ಸದ್ಯ ವಿಧಾನಪರಿಷತ ಚುನಾವಣೆ ಇದ್ದು, ಚುನಾವಣೆ ಮುಗಿದ ನಂತರ ಅಂದರೆ ೨೦೨೨ರ ಜನವರಿ ಮೊದಲ ವಾರದಲ್ಲಿ ಕಾಂಗ್ರೆಸ್‌ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

 

Share Post