CrimeDistricts

420 ಅನ್ನಭಾಗ್ಯ ಅಕ್ಕಿ ಮೂಟೆಗಳಿದ್ದ ಲಾರಿಯೇ ಕಳುವಾಯ್ತು..!

ಯಾದಗಿರಿ; ಅನ್ನಭಾಗ್ಯ ಅಕ್ಕಿ ಚೀಲಗಳಿಂದ ತುಂಬಿದ್ದ ಲಾರಿಯನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರದ ಎಪಿಎಂಸಿ ಯಾರ್ಡ್‌ನಲ್ಲಿ ಈ ಕೃತ್ಯ ಎಸಗಲಾಗಿದೆ. ಅಕ್ಕಿ ಮೂಟೆಗಳನ್ನು ತುಂಬಿಸಿ ನಿಲ್ಲಿಸಿದ್ದಾಗ, ದುಷ್ಕರ್ಮಿಗಳು ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಿದ್ದಾರೆ.

ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಲು ಅಕ್ಕಿ ಮೂಟೆಗಳನ್ನು ಲಾರಿಗೆ ತುಂಬಿಸಲಾಗಿತ್ತು. ಸುಮಾರು 20 ಟನ್‌ ಅಕ್ಕಿ ಅದರಲ್ಲಿತ್ತು. 420 ಚೀಲಗಳಿದ್ದ ಲಾರಿಯನ್ನು ಕದಿಯಲು ಕಾದಿದ್ದ ದುಷ್ಕರ್ಮಿಗಳು ಅಧಿಕಾರಿಗಳ ಕಣ್ತಪ್ಪಿಸಿ ಕದ್ದುಕೊಂಡು ಹೋಗಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಈ ಕಳವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶಹಾಪುರ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಆರೋಪಿಗಳನ್ನು ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ಆದ್ರೆ ಇದುವರೆಗೂ ಆರೋಪಿಗಳಾಗಿ, ಲಾರಿಯಾಗಲೀ ಪತ್ತೆಯಾಗಿಲ್ಲ.

 

Share Post