Districts

ನನ್ನ ಗಂಡನದ್ದು ಆತ್ಮಹತ್ಯೆಯಲ್ಲ, ಕೊಲೆ; ಸಂತೋಷ್‌ ಪತ್ನಿ ಜಯಶ್ರೀ ಆರೋಪ

ಬೆಳಗಾವಿ; ನನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಪತ್ನಿ ಜಯಶ್ರೀ ಆರೋಪಿಸಿದ್ದಾರೆ. ಬೆಳಗಾವಿಯ ಮನೆಯಲ್ಲಿ ಮಾತನಾಡಿರುವ ಅವರು, ನಲವತ್ತು ಪರ್ಸೆಂಟ್‌ ಕಮೀಷನ್‌ ಕೇಳುತ್ತಿರುವ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ದರು
ಎಂದು ಹೇಳಿದ್ದಾರೆ.

ನಂಬಿಕೆ ಮೇಲೆ ನಾಲ್ಕು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನಡೆಸಿದ್ದರು. ಆದ್ರೆ ಬಿಲ್‌ ಪಾವತಿಯಾಗದ ಕಾರಣ ಅವರು ತುಂಬಾ ನೊಂದಿದ್ದರು. ನಲವತ್ತು ಪರ್ಸೆಂಟ್‌ ಕಮೀಷನ್‌ ಕೇಳುತ್ತಿದ್ದರಿಂದ ಅವರು ತುಂಬಾ ಒತ್ತಡದಲ್ಲಿದ್ದರು ಎಂದು ಜಯಶ್ರೀ ಹೇಳಿದ್ದಾರೆ. ಇತ್ತ ಸಂತೋಷ್‌ ತಾಯಿ ಪಾರ್ವತಿ ಕೂಡಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಅವರು ಸಂತೋಷ್‌ ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದು ನ್ಯಾಯಾನಾ ಎಂದು ಪ್ರಶ್ನೆ ಮಾಡಿದ್ದಾರೆ.

Share Post