DistrictsPolitics

ರಿಷಬ್‌ ಶೆಟ್ಟಿ ಬಿಜೆಪಿ ಸ್ಟಾರ್‌ ಪ್ರಚಾರಕರಾಗ್ತಾರಾ..?; ಕೊಲ್ಲೂರು ದೇಗುಲದಲ್ಲಿ ಸಿಎಂ ಜೊತೆ ಕಾಣಿಸಿಕೊಂಡ ನಟ

ಉಡುಪಿ; ನಟ ರಿಷಬ್‌ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪರವಾದ ನಿಲುವು ತಳೆದಿದ್ದರು. ಮೋದಿಯವರನ್ನು ಅವರು ಹಾಡಿಹೊಗಳುತ್ತಿದ್ದರು. ಇದೀಗ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಟಾರ್‌ ಪ್ರಚಾರಕರಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಯಾಕಂದ್ರೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟ ರಿಷಬ್‌ ಶೆಟ್ಟಿ ಕೂಡಾ ದೇವಸ್ಥಾನದಲ್ಲಿ ಹಾಜರಿದ್ದರು. ಸಿಎಂ ಬರುವುದಕ್ಕೂ ಮೊದಲೇ ರಿಷಬ್‌ ಶೆಟ್ಟಿ ದೇವಸ್ಥಾನದಲ್ಲಿದ್ದು, ಸಿಎಂ ಜೊತೆ ಪೂಜೆ ಸಲ್ಲಿಸಿದರು.

ಇನ್ನು ಇದೇ ವೇಳೆ ಮಾತನಾಡಿರುವ ಸಿಎಂ ಬೊಮ್ಮಾಯಿ, ರಿಷಬ್‌ ಶೆಟ್ಟಿಯವರು ಈಗಾಗಲೇ ತತ್ವ ಸಿದ್ದಾಂತವನ್ನು ಒಪ್ಪಿದ್ದಾರೆ ಎನ್ನುವ ಮೂಲಕ ಅವರೂ ಪ್ರಚಾರಕ್ಕೆ ಬರುವ ಮುನ್ಸೂಚನೆಯನ್ನು ಸಿಎಂ ಕೊಟ್ಟಿದ್ದಾರೆ. ರಿಷಬ್‌ ಶೆಟ್ಟಿಯವರು ನಾನು ಬರುವ ಮೊದಲೇ ದೇಗುಲಕ್ಕೆ ಬಂದಿದ್ದರು. ಇದು ಆಕಸ್ಮಿಕ ಭೇಟಿ ಅಷ್ಟೇ. ಅವರು ಈ ಹಿಂದೆ ಕೂಡಾ ನಮ್ಮ ಸಿದ್ದಾಂತವನ್ನು ಪ್ರತಿಪಾದಿಸಿದ್ದರು. ಆದ್ರೆ ಪ್ರಚಾರ ಮಾಡುವ ಬಗ್ಗೆ ರಿಷಬ್‌ ಜೊತೆ ಇನ್ನೂ ಏನನ್ನೂ ಮಾತನಾಡಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Share Post