DistrictsPolitics

ನಾಳೆ ಹಲವರು ಜೆಡಿಎಸ್‌ ಸೇರುತ್ತಾರೆ, ನಾಳೆಯೇ ಎರಡನೇ ಪಟ್ಟಿ ರಿಲೀಸ್‌; ಹೆಚ್‌.ಡಿ.ಕುಮಾರಸ್ವಾಮಿ

ಕಲಬುರಗಿ; ನಾಳೆ ಹಲವು ನಾಯಕರು ಜೆಡಿಎಸ್‌ ಪಕ್ಷ ಸೇರಲಿದ್ದಾರೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ನೆಲಕಚ್ಚಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದ್ರೆ ಜೆಡಿಎಸ್‌ ಎಷ್ಟು ಸೀಟು ಗೆಲ್ಲುತ್ತೆ ನೋಡುತ್ತಿರಿ ಎಂದು ಹೇಳಿದರು.

ನಾಳೆ ಜೆಡಿಎಸ್‌ನ ಎರಡನೇ ಪಟ್ಟಿ ರಿಲೀಸ್‌ ಆಗಲಿದೆ. ಮೊದಲ ಪಟ್ಟಿಯಲ್ಲಿನ ಕೆಲವು ಕ್ಷೇತ್ರಗಳಿಗೆ ಟಿಕೆಟ್‌ ಬದಲಾವಣೆ ಆಗಬಹುದು ಎಂದು ಕುಮಾರಸ್ವಾಮಿಯವರು ಇದೇ ವೇಳೆ ತಿಳಿಸಿದರು. ನಾಳೆ ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಹಲವು ನಾಯಕರು ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ. ಅಲ್ಲದೆ ನಾಳೆಯೇ ಎರಡನೇ ಪಟ್ಟಿ ರಿಲೀಸ್‌ ಮಾಡಲಿದ್ದೇವೆ. ಈಗಾಗಲೇ ಘೋಷಣೆಯಾಗಿರುವ ಕೆಲ ಕ್ಷೇತ್ರಗಳಲ್ಲಿ ಟಿಕೆಟ್‌ ಬದಲಾವಣೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇನ್ನು ಹಾಸನ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಇನ್ನೆರಡು ದಿನಗಳಲ್ಲಿ ಹಾಸನ ಸಮಸ್ಯೆ ಬಗೆಹರಿಯಲಿದೆ. ಹಾಸನದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಇನ್ನು ವೈಎಸ್‌ವಿ ದತ್ತಾ ಮತ್ತೆ ಜೆಡಿಎಸ್‌ಗೆ ಬರುವ ವಿಚಾರದ ಬಗ್ಗೆಯೂ ಕುಮಾರಸ್ವಾಮಿ ಮಾತನಾಡಿದರು. ಈ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

Share Post