CrimeDistricts

ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ಎಂಜಿನಿಯರ್ ಗಳ ದಾರುಣ ಸಾವು!

ಬಳ್ಳಾರಿ; ಬಳ್ಳಾರಿ ಜಿಲ್ಲೆ ಜಿಂದಾಲ್ ನ ಎಚ್ ಎಸ್ ಎಂ ಪ್ಲಾಂಟ್ ನಲ್ಲಿ ದಾರುಣ ಘಟನೆ ನಡೆದಿದೆ.. ಇಲ್ಲಿನ ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ಎಂಜಿನಿಯರ್ ಗಳು ಸಾವನ್ನಪ್ಪಿದ್ದಾರೆ.. ಘಟನೆಗೆ ಕಾರಣ ಏನು ಅನ್ನೋದು ಗೊತ್ತಾಗಿಲ್ಲ..

 ಭುವನಹಳ್ಳಿಯ ಜಡೆಪ್ಪ(23), ಬೆಂಗಳೂರಿನ ಸುಶಾಂತ್(25) ಹಾಗೂ ಚೆನ್ನೈನ ಶಿವಮಹದೇವ(23) ಮೃತ ಎಂನಿಯರ್ ಗಳು. ಪೈಪ್ ಜೋಡಣೆ ಕೆಲಸ ನಡೆಯುತ್ತಿದ್ದು, ಮೂವರೂ ಇದರ ಪರಿಶೀಲನೆಯಲ್ಲಿ ಇದ್ದರು. ಇದೇ ವೇಳೆ ಬೃಹತ್ ಪೈಪ್ ನಿಂದ ಇದ್ದಕ್ಕಿದ್ದಂತೆ ನೀರು ನುಗ್ಗಿದೆ.. ಇದರಿಂದಾಗಿ ಮೂವರು ಕೊಚ್ಚಿ ಹೋಗಿ ದೊಡ್ಡ ಟ್ಯಾಂಕ್ ಸೇರಿದ್ದಾರೆ. ಅಲ್ಲಿಯೇ ಮೃತಪಟ್ಟಿದ್ದಾರೆ..

ಸಂಡೂರು ಡಿವೈಎಸ್ಪಿ ಪ್ರಸಾದ್ ಗೋಖಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುರುವಾರ ಸಂಜೆ ಘಟನೆ ನಡೆದಿದೆ. ಇದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಹೋದ ಪರಿಣಾಮವೇ, ಆಕಸ್ಮಿಕವೇ ಅಥವಾ ಇದರ ಹಿಂದೆ ಒಳಸಂಚು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

Share Post