CrimeDistricts

ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ; ಓರ್ವ ಮಹಿಳೆ ಸಾವು

ರಾಮನಗರ; ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರ ತಾಲ್ಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕರುಣಾಜನಕ ನಡೆದಿದೆ. ಘಟನೆಯಲ್ಲಿ ಮಂಗಳಮ್ಮ (28) ಮೃತ ಪಟ್ಟಿದ್ದಾರೆ, ಪತಿ ರಾಜು (32) ಮಕ್ಕಳು ಆಕಾಶ್ (9) ಕೃಷ್ಣ 13, ಸವಿತಾ (24), ಮಗಳು ದರ್ಶಿನಿ (4) ಹಾಗೂ ಸೊಲ್ಲಾಪುರದಮ್ಮ( 48) ಆತ್ಮಹತ್ಯೆಗೆ ಯತ್ನಿಸಿದವರು.

ಇಲಿ ಪಾಶಾಣ ಸೇವಿಸಿದ್ದ ಇವರನ್ನ ರಾಮಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜು 11 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲಗಾರರು ಪದೆ ಪದೆ ಕಿರುಕುಳ‌ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಸಾಲಗಾರರ ಕಾಟದಿಂದ ಬೇಸತ್ತ ಕುಟುಂಬ ಗ್ರಾಮವನ್ನ ತೊರೆದು ಬೆಂಗಳೂರಿಗೆ ಬಂದಿದ್ದರು. ಸಾಲಗಾರರು ಬೆನ್ನಿಗಂಟಿದ ಬೇತಾಳದಂತೆ ಬೆನ್ನುಬಿದ್ದಿದ್ದರಂತೆ. ಇದರಿಂದ ಬೇಸತ್ತ ರಾಜು ಇಡೀ ಕುಟುಂಬಕ್ಕೆ ಇಲಿ ಪಾಷಾಣ ನೀಡಿದ್ದಾನೆ ಎನ್ನಲಾಗಿದೆ.

Share Post