HealthInternationalNational

ಲಾಲುಗೆ ಕಿಡ್ನಿ ದಾನ ಮಾಡಲು ಮಗಳು ರೋಹಿಣಿ ನಿರ್ಧಾರ

ಪಾಟ್ನಾ; ಎರಡೂ ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ಗೆ ಒಂದು ಕಿಡ್ನಿ ನೀಡಲು ಅವರ ಪುತ್ರಿ ರೋಹಿಣಿ ಆಚಾರ್ಯ ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಲಾಲು ಅವರಿಗೆ ಕಿಡ್ನಿ ಕಸಿ ನಡೆಯಲಿದ್ದು, ಲಾಲು ಅವರು ಇದಕ್ಕಾಗಿ ಸಿಂಗಾಪುರಕ್ಕೆ ತೆರಳಲಿದ್ದಾರೆ.

ಕಳೆದ ತಿಂಗಳು ಲಾಲು ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಲಾಲುಗೆ ವೈದ್ಯರು ಸಲಹೆ ನೀಡಿದ್ದರು. ಇದರಿಂದಾಗಿ ಸಿಂಗಾಪುರದಲ್ಲೇ ವಾಸವಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಅವರು ಲಾಲುಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಮೊದಲು ಲಾಲು ಒಪ್ಪಿರಲಿಲ್ಲ. ಕುಟುಂಬದವರು ಹಾಗೂ ಮಗಳು ಸತತ ಒತ್ತಡದ ನಂತರ ಈಗ ಲಾಲು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಒಪ್ಪಿದ್ದಾರೆ.

ನವೆಂಬರ್ 20 ರಿಂದ 24ರ ಒಳಗೆ ಲಾಲು ಪ್ರಸಾದ್‌ ಯಾದವ್‌ ಅವರನ್ನು ಮತ್ತೆ ಸಿಂಗಾಪರಕ್ಕೆ ಕರೆತರಲಾಗುತ್ತೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ಮೂತ್ರಪಿಂಡ ಕಸಿ ನಡೆಯಲಿದೆ.

Share Post