CinemaDistricts

ಮುತ್ತತ್ತಿಗೆ ಭೇಟಿ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಮಂಡ್ಯ; ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಇಂದು ಮಳವಳ್ಳಿ ತಾಲ್ಲೂಕಿನ ಮುತ್ತಿತ್ತಿಗೆ ಭೇಟಿ ನೀಡಿದ್ದರು. ಗಂಧದ ಗುಡಿ ಚಿತ್ರ ಬಿಡುಗಡೆ ನಂತರ ಅಶ್ವಿನಿ ಹಲವು ದೇಗುಲಗಳಲ್ಲಿ ಪೂಜೆ ಸಲ್ಲಿಸಿದ್ದರು. ಅದೇ ರೀತಿ ಇಂದು ಮುತ್ತೆತ್ತರಾಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮುತ್ತತ್ತಿಯ ಶ್ರೀ ಆಂಜನೇಯ ಸ್ವಾಮಿ ಡಾ. ರಾಜ್‍ಕುಮಾರ್ ಅವರ ಕುಟುಂಬದ ಆರಾಧ್ಯ ದೇವಾಗಿದ್ದಾಎಎ, ಡಾ.ರಾಜ್‌ ಕಾಲದಿಂದಲೂ ಈ ಕುಟುಂಬದ ಸದಸ್ಯರು ಆಗಾಗ ಮುತ್ತತ್ತಿಗೆ ಭೇಟಿ ನೀಡುತ್ತಿದ್ದರು. ಅದೇ ರೀತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕೂಡಾ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುವರಾಜ್ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಸೇರಿದಂತೆ ಹಲವರು ಅಶ್ವಿನಿ ಜೊತೆ ಇದ್ದರು.

Share Post