Districts

ಪಿಎಸ್‌ಐ ಅಕ್ರಮ ಪ್ರಕರಣ; ಬಂಧನವಾಗಿರುವವರು ಕಿಂಗ್‌ಪಿನ್‌ಗಳಲ್ಲ – ಪ್ರಿಯಾಂಕ್‌ ಖರ್ಗೆ

ಮೈಸೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವವರು ಯಾರೂ ಕಿಂಗ್‌ಪಿನಗಳಲ್ಲ. ಅವರೆಲ್ಲಾ ಮಧ್ಯವರ್ತಿಗಳು ಅಷ್ಟೇ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಈ ಹಗರಣದ ಹಿಂದೆ ದೊಡ್ಡ ದೊಡ್ಡವರಿದ್ದಾರೆ. ಅವರನ್ನ ಹೊರಗೆ ತರಬೇಕಾಗಿದೆ. ಬರೀ ಮಧ್ಯವರ್ತಿಗಳನ್ನು ಮಾತ್ರ ಇದುವರೆಗೆ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

 

ಈ ಪ್ರಕರಣದಲ್ಲಿ ಪ್ರಭಾವಿಗಳಿದ್ದಾರೆ. ಗೃಹ ಸಚಿವರಿಗೆ ಕೇಶವಕೃಪದಿಂದ ಆದೇಶಗಳು ಬರುತ್ತಿವೆ. ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣವನ್ನು ನಿಷ್ಟಕ್ಷಪಾತವಾಗಿ ತನಿಖೆ ನಡೆಸಬೇಕು. ನಿಜವಾದ ಕಿಂಗ್‌ಪಿನ್‌ಗಳನ್ನು ಬಂಧಿಸಬೇಕೆಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

Share Post