Bengaluru

ಪಿಎಸ್‌ಐ ನೇಮಕಾತಿ ಅಕ್ರಮದ ಹಿಂದೆ ಪ್ರಭಾವಿ ಮಂತ್ರಿ ಸಹೋದರ..?; 80 ಲಕ್ಷಕ್ಕೆ ಡೀಲ್‌ ಆಗಿತ್ತಾ..?

ಬೆಂಗಳೂರು; 545 ಪಿಎಸ್‌ಐ ಹುದ್ದೆಗಳ ನೇಮಕಾತಿ ವೇಳೆ ನಡೆದಿದ್ದ ಅಕ್ರಮದ ಉರುಳು ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಬುಡಕ್ಕೂ ಬಂದಿದೆ ಎಂದು ಹೇಳಲಾಗುತ್ತಿದೆ. ಬಂಧತ ಅಭ್ಯರ್ಥಿ ದರ್ಶನ್‌ ಗೌಡ ಎಂಬಾತನನ್ನು ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ನೇಮಕಾತಿ ಪರೀಕ್ಷೆಯಲ್ಲಿ ಟಾಪ್‌ ರ್ಯಾಂಕಿಂಗ್‌ ಬರುವಂತೆ ಮಾಡಲು ಸಚಿವರ ಸಹೋದರನಿಗೆ ಎಂಬತ್ತು ಲಕ್ಷ ರೂಪಾಯಿ ನೀಡಿದ್ದಾಗಿ ಅಭ್ಯರ್ಥಿಯೊಬ್ಬ ಎಂಬಾತ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರಭಾವಿ ಮಂತ್ರಿಯೊಬ್ಬರ ಸಹೋದರನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಇನ್ನೊಂದೆಡೆ ಮಾಗಡಿ ಮೂಲದ ಮೂವರು ಅಭ್ಯರ್ಥಿಗಳಿಂದ ಮಂತ್ರಿ ಸಹೋದರನ ಡೀಲ್‌ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂದ ವಿಚಾರಣೆ ತೀವ್ರಗೊಳಿಸಲಾಗಿದೆ.

Share Post