International

ಎರಡು ಬಾರಿ ನನ್ನ ಮೇಲೆ ಗುಂಡಿನ ದಾಳಿ ನಡೆದಿದೆ-ವಿದ್ಯಾರ್ಥಿ ಅಳಲು

ಕೀವ್:‌ ಉಕ್ರೇನ್ ರಾಜಧಾನಿಯಿಂದ ಹೊರಬರಲು ಯತ್ನಿಸಿದ ಭಾರತೀಯ ವಿದ್ಯಾರ್ಥಿಗೆ ಎರಡು ಬಾರಿ ಗುಂಡಿನ ದಾಳಿ ನಡೆದಿದೆ. ಗಂಭೀರ ಗಾಯಗಳಾಗಿದ್ದ ಆತನನ್ನು ಕೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಅವನ ಭುಜ ಮತ್ತು ಕಾಲಿಗೆ ತಗುಲಿ ನಡೆಯಲಾಗದೆ ಕುಸಿದು ಬಿದ್ದಿದ್ದಾನೆ.

‘ವೈದ್ಯರು ನನ್ನ ಎದೆಯಿಂದ ಬುಲೆಟ್ ತೆಗೆದಿದ್ದಾರೆ. ನನ್ನ ಕಾಲಿಗೆ ಕೂಡ ಗಾಯವಾಗಿದೆ ಎಂದು ವಿದ್ಯಾರ್ಥಿ ಹರ್ಜೋತ್ ಮಾಧ್ಯಮವೊಂದಕ್ಕೆ ತಿಳಿಸಿದ್ರು. ಸದ್ಯ ಅವರು ಉಕ್ರೇನ್ ರಾಜಧಾನಿಯ ಕೀವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳ ಬಗ್ಗೆ ತನಗೆ ಸ್ಪಷ್ಟತೆ ಇಲ್ಲ ಮತ್ತು ಅವರು ಎಲ್ಲಿಗೆ ಹೋಗಿದ್ದಾರೋ ಅಥವಾ ಏನ್‌ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಹರ್ಜೋತ್ ಸಿಂಗ್ ಹೇಳಿದರು.

ಯಾವುದೇ ಹಾನಿಯಾಗದಂತೆ ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆತರುವುದಾಗಿ ಇಂದು ಬೆಳಗ್ಗೆ ವಿದೇಶಾಂಗ ಸಚಿವ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ. ಈ ಹಿಂದೆ ಭಾರತೀಯ ರಾಯಭಾರ ಕಚೇರಿ ಎಲ್ಲರಿಗೂ ಕೀವ್ ತೊರೆಯುವಂತೆ ಸಲಹೆ ನೀಡಿತ್ತು.

Share Post