Sports

ಮೂರನೇ ಟೆಸ್ಟ್‌ಗೆ ವಿರಾಟ್‌ ಲಭ್ಯ : ಚೇತೇಶ್ವರ ಪುಜಾರಾ

ಜೋಹಾನ್ಸ್‌ಬರ್ಗ್‌ : ಭಾರತ ಮತ್ತು ದ.ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್‌ ಕೊಹ್ಲಿಯವರನ್ನು ತಂಡದಿಂದ ಕೈಬಿಡಲಾಗಿತ್ತು. ಕೆ.ಎಲ್‌ ರಾಹುಲ್‌ ಅವರಿಗೆ ನಾಯಕನ ಜವಾಬ್ದಾರಿ ನೀಡಲಾಗಿತ್ತು. ವಿಷಯ ತೀಲಿದ ಕೂಡಲೇ ನೆಟ್ಟಿಗರು ಶಾಕ್‌ ಆಗಿದ್ದರು. ವಿರಾಟ್‌ ಅವರು ಏಕೆ ಆಡುತ್ತಿಲ್ಲ ಎಂಬ ಪ್ರಶ್ನೆಗಳು ಕೂಡ ಎದ್ದಿದ್ದವು. ನಂತರ ತಿಳಿದ ವಿಚಾರ ಏನೆಂದರೆ ವಿರಾಟ್‌ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು.

ಎರಡನೇ ಟೆಸ್ಟ್‌ನಲ್ಲಿ ಅರ್ಧ ಶತಕ ಸಿಡಿಸಿದ ಪುಜಾರಾ ಅವರು ಮಾಧ್ಯಮದೊಂದಿಗೆ ಮಾತನಾಡಬೇಕಾದರೆ ಪತ್ರಕರ್ತರೊಬ್ಬರು ವಿರಾಟ್‌ ಕೊಹ್ಲಿ ಬಗ್ಗೆ ವಿಚಾರಿಸಿದ್ದಾರೆ.  ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚೇತೇಶ್ವರ ಪುಜಾರಾ, “ವಿರಾಟ್‌ ಕೊಹ್ಲಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮುಂದಿನ ಟೆಸ್ಟ್‌ ಪಂದ್ಯಕ್ಕೆ ಲಭ್ಯರಿರುತ್ತಾರೆ” ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಸಂಕಷ್ಟ ಎದುರಾಗಿದೆ. 240 ರನ್‌ಗಳ ಗುರಿ ನೀಡಿದ್ದ ಭಾರತಕ್ಕೆ ಆಘಾತ ಎದುರಾಗಿದೆ. ಮೂರನೇ ದಿನದಾಟ ಅಂತ್ಯವಾಗುವಷ್ಟರಲ್ಲಿ, ದ.ಆಫ್ರಿಕಾ ತಂಡವು ಕೇವಲ ಎರಡು ವಿಕೆಟ್‌ ನಷ್ಟಕ್ಕೆ  118 ರನ್‌ ಗಳಿಸಿದೆ. ಇನ್ನು ಕೇವಲ 122 ರನ್‌ಗಳ ಅವಶ್ಯಕತೆ ಇದ್ದು ಸುಲಭವಾಗಿ ಗುರಿ ಮುಟ್ಟುವ ವಿಶ್ವಾಸದಲ್ಲಿದ್ದಾರೆ.

ಪಂದ್ಯಕ್ಕೆ ಮಳೆ ಅಡ್ಡಿ ಆಗಿದೆ ನಾಲ್ಕನೇ ದಿನದಾಟ ಇನ್ನೂ ಶುರುವಾಗಿಲ್ಲ. ಭಾರತ ಪಂದ್ಯವನ್ನು ಕಸಿದುಕೊಳ್ಳಲು 8 ವಿಕೆಟ್‌ಗಳ ಅವಶ್ಯಕತೆ ಇದೆ.

Share Post