Sports

ಮುಂಬೈ ಇಂಡಿಯನ್ಸ್‌ ಸತತ ಸೋಲು; ಕಂಗೆಟ್ಟ ಪಾಂಡ್ಯ ದೇವರ ಮೊರೆ!

ಮುಂಬೈ; ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್‌ ಸತತ ಮೂರು ಬಾರಿ ಸೋತಿದೆ.. ಇದರಿಂದಾಗಿ ಹಾರ್ದಿಕ್‌ ಪಾಂಡ್ಯ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಅವರು ತಂಡದ ಗೆಲುವಿಗಾಗಿ ಅವರು ದೇವರ ಮೊರೆ ಹೋಗಿದ್ದಾರೆ.. ಪಾಂಡ್ಯ ಅವರು ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಬಾರಿಯ ಐಪಿಎಲ್‌ ಟಿ20 ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಮುಗ್ಗರಿಸಿದೆ. ಆಡಿದ ಮೂರೂ ಪಂದ್ಯಗಳಲ್ಲೂ ಹೀನಾಯವಾಗಿ ಸೋತಿದೆ.. ಒಂದು ಪಾಯಿಂಟ್‌ ಕೂಡಾ ಪಡೆಯಲಾಗಿಲ್ಲ.. ಇದರಿಂದಾಗಿ ಹಾರ್ದಿಕ್‌ ಪಾಂಡ್ಯ ಎಲ್ಲೆಡೆ ಟೀಕೆಗೊಳಗಾಗಿದ್ದಾರೆ.. ದೇಶದಾದ್ಯಂತ ಎಲ್ಲರೂ ಪಾಂಡ್ಯ ವಿರುದ್ಧ ಮುಗಿಬಿದ್ದಿದ್ದಾರೆ.. ಸತತ ಸೋಲಿನಿಂದ ಮುಂಬೈ ಇಂಡಿಯನ್‌ ತಂಡ ಕಂಗೆಟ್ಟಿದೆ.. ಈ ನಡುವೆ ಪಾಂಡ್ಯ ದೇವರ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ..

ಐಪಿಎಲ್​ ಸರಣಿಯ ನಡುವೆಯೇ ಗುಜರಾತ್‌ಗೆ ತೆರಳಿರುವ ಪಾಂಡ್ಯ, ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.. 2022, 2023ರ ಐಪಿಎಲ್​ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್​​ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿದ್ದರು. 2024ರ ಐಪಿಎಲ್​​​​​ ನಲ್ಲಿ ಅವರು ಮುಂಬೈ ಇಂಡಿಯನ್ಸ್​ ಪಾಲಾಗಿದ್ದು, ಕ್ಯಾಪ್ಟನ್ಸಿ ಕೂಡಾ ನೀಡಲಾಗಿದೆ.. ಆದ್ರೆ ದುರದೃಷ್ಟವೋ ಏನೋ ಆಡಿದ ಮೂರೂ ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್‌ ತಂಡ ಸೋತಿದೆ..

 

Share Post